Advertisement

ಆಗುಂಬೆಯಲ್ಲಿ ಮಿತಿಮೀರಿದೆ ಒಂಟಿ ಸಲಗದ ಹಾವಳಿ: ಜನರ ಆಕ್ರೋಶ

09:32 AM Oct 16, 2019 | Team Udayavani |

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಭಾಗದಲ್ಲಿ ಒಂಟಿ ಸಲಗದ ಹಾವಳಿ ಇತ್ತೀಚೆಗೆ ಹೆಚ್ಚಳವಾಗಿದ್ದು, ಊರೊಳಗೆ ನುಗ್ಗುತ್ತಿರುವ ಆನೆಯಿಂದಾಗಿ ಊರವರು ಭೀತಿಯ ಜೀವನ ನಡೆಸುತ್ತಿದ್ದಾರೆ.

Advertisement

ಆಗುಂಬೆ, ಮಲ್ಲಂದೂರು ಭಾಗದಲ್ಲಿ ಪ್ರತಿದಿನವೂ ಈ ಒಂಟಿ ಸಲಗ ಕಾಣಿಸಿಕೊಳ್ಳುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಊರಿನ ಮನೆಗಳ ಬಳಿ ಆನೆ ಲಗ್ಗೆ ಇಡುತ್ತಿದ್ದು, ಆಗುಂಬೆಯ ಕೆನರಾ ಬ್ಯಾಂಕ್ ಹಿಂಭಾಗದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದೆ.

ಈ ಬಾರಿಯ ಮಳೆಗಾಲದ ಆರಂಭದಲ್ಲಿ ಕಾಣಿಸಿಕೊಂಡಿದ್ದ ಒಂಟಿ ಸಲಗ ಅಡಿಕೆ, ಬಾಳೆ ತೋಟಗಳನ್ನು ಧ್ವಂಸ ಮಾಡಿತ್ತು. ಈಗ ಮತ್ತೆ ಕಾಣಿಸಿಕೊಂಡಿದ್ದು ಬಾಕಿ ಇರುವ ಬೆಳೆಯನ್ನೂ ಈ ಆನೆಯ ಉಪದ್ರದಿಂದಾಗಿ ಕಳೆದುಕೊಳ್ಳುವ ಭೀತಿಯಲ್ಲಿ ರೈತರಿದ್ದಾರೆ.

ಈ ಭಾಗದಲ್ಲಿ ಆಗಾಗ ಆನೆಯು ತನ್ನ ಇರುವಿಕೆಯನ್ನು ತೋರ್ಪಡಿಸುತ್ತಿದ್ದರೂ. ಅನೇಕ ದೂರಿನ ನಂತರವೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next