Advertisement

ಕತೆಗಾರ್ತಿ ಫಾತಿಮಾ ರಲಿಯಾಗೆ “ಛಂದ ಪುಸ್ತಕ ಬಹುಮಾನ”

08:57 PM Oct 11, 2022 | Team Udayavani |

ಬೆಂಗಳೂರು: ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದ್ದು ಈ ಸಾಲಿನ “ಛಂದ ಪುಸ್ತಕ ಬಹುಮಾನ’ಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಪೆರ್ನೆ ಗ್ರಾಮದ ಕತೆಗಾರ್ತಿ ಫಾತಿಮಾ ರಲಿಯಾ ಆಯ್ಕೆ ಆಗಿದ್ದಾರೆ. ಛಂದ ಪುಸ್ತಕ ಬಹುಮಾನ 40 ಸಾವಿರ ರೂ. ನಗದು ಮತ್ತು ಪುರಸ್ಕಾರ ಒಳಗೊಂಡಿದೆ.

Advertisement

ಪುಸ್ತಕವನ್ನು ಇದೇ ನವೆಂಬರ್‌ ತಿಂಗಳಲ್ಲಿ ಪ್ರಕಟಣೆ ಮಾಡಲಾಗುವುದು. ಕತೆಗಾರ್ತಿ ಫಾತಿಮಾ ರಲಿಯಾ ಅವರು ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ವಾಸಿಸುತ್ತಿದ್ದಾರೆ.

ಇನಾ#ರ್ಮೇಶನ್‌ ಟೆಕ್ನಾಲಜಿಯಲ್ಲಿ ಎಂಬಿಎ ಪದವಿ ಪಡೆದಿರುವ ಇವರು “ಕಡಲು ನೋಡಲು ಹೋದವಳು’ ಎಂಬ ಲಲಿತ ಪ್ರಬಂಧಗಳ ಸಂಕಲನವನ್ನು ಈ ವರ್ಷ ಪ್ರಕಟಿಸಿದ್ದಾರೆ.

ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಗೆ 93 ಕತೆಗಾರರು ಭಾಗವಹಿಸಿದ್ದರು. ಈ ಸ್ಪರ್ಧೆಯ ಆಯ್ಕೆಯನ್ನು ಸಿನಿಮಾ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರು ಮಾಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next