Advertisement

ಆಸ್ತಿ ಆಸೆಗೆ ಅಪ್ಪನ ಮರ್ಮಾಂಗಕ್ಕೆ ಇರುವೆ ಬಿಟ್ಟ ಮಗ!

04:55 PM Jan 19, 2017 | |

ದಾವಣಗೆರೆ: ಮಲೇಬೆನ್ನೂರು ಗ್ರಾಮದಲ್ಲಿ ಆಸ್ತಿ ಆಸೆಯಿಂದ ಮಗ ತಂದೆಗೆ ಚಿತ್ರಹಿಂಸೆ ನೀಡಿದ ಪ್ರಕರಣವೊಂದು ಖಾಸಗಿ ಮಾಧ್ಯಮದ ವರದಿಯಿಂದ ಬೆಳಕಿಗೆ ಬಂದಿದ್ದು, ಚಿತ್ರಹಿಂಸೆಗೆ ಒಳಗಾದ ರಾಜಣ್ಣ(57) ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ನಡೆದಿದ್ದೆನು: ಚಿತ್ರಹಿಂಸೆಗೆ ಒಳಗಾದ ರಾಜಣ್ಣ ಬಿಎಸ್‍ಎನ್‍ಎಲ್‍ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು, ಅವರಿಗೆ ಮಗ ನವೀನ್ ಮತ್ತು ಆತನ ಪತ್ನಿ ಸೌಮ್ಯ ಸೇರಿ ಹಣದ ಆಸೆಗೆ ಅವರನ್ನು ಮನೆಯಲ್ಲಿ ಕೂಡಿಹಾಕಿದ್ದಲ್ಲದೆ ಮರ್ಮಾಂಗಕ್ಕೆ ಇರುವೆ ಬಿಟ್ಟು ಚಿತ್ರಹಿಂಸೆ ನೀಡುತ್ತಿದ್ದರು.

ಮಗ ಮತ್ತು ಸೊಸೆಯ ಕಾಟದಿಂದ ಬೇಸತ್ತ ರಾಜಣ್ಣ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದು, ದಾವಣಗೆರೆಯ ರಿಂಗ್ ರೋಡ್ ಅಟೋ ನಿಲ್ದಾಣದ ಬಳಿ ಸುಸ್ತಾಗಿ ಬಿದ್ದಿದ್ದರು. ಇವರನ್ನು ಕಂಡ ಕರ್ನಾಟಕ ಯುವ ಶಕ್ತಿ ವೇದಿಕೆ ಕಾರ್ಯಕರ್ತರು ಅವರನ್ನು ರಕ್ಷಿಸಿ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.

ಮಗ ನವೀನ್ ಕರ್ಣಾಟಕ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಹಣದ ಆಸೆಗಾಗಿ ನನ್ನನ್ನು ಕೂಡಿ ಹಾಕಿ ಮರ್ಮಾಂಗಕ್ಕೆ ಇರುವೆ ಬಿಟ್ಟು ಚಿತ್ರಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತು ಮನೆಯಿಂದ ತಪ್ಪಿಸಿಕೊಂಡು ಬಂದೆ ಅಂತಾ ರಾಜಣ್ಣ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next