Advertisement

ತಂದೆ , ನಾಲ್ವರು ಮಕ್ಕಳು ಸೇರಿ ಐವರು ಕೆರೆಯಲ್ಲಿ ನೀರುಪಾಲು

02:42 PM Nov 06, 2017 | Sharanya Alva |

ಕೊಪ್ಪಳ; ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಹೊರಬಂದು ಈಜಲು ತೆರಳಿದ್ದ ಹೈದರಾಬಾದ್ ಮೂಲದ ಐವರು ನೀರುಪಾಲಾದ ದಾರುಣ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹೇಮಗುಡ್ಡ ಕೆರೆಯಲ್ಲಿ ಸಂಭವಿಸಿದೆ.

Advertisement

ಹೈದರಾಬಾದ್ ಮೂಲದ ರಾಘವೇಂದ್ರ ಎಂಬವರು ತಮ್ಮ ನಾಲ್ವರು ಮಕ್ಕಳ ಜತೆ ಗಂಗಾವತಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಸೋಮವಾರ ಹೇಮಗುಡ್ಡದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ, ಅಲ್ಲಿಂದ ಕೆಳಗಡೆ ಬಂದಾಗ ಕೆರೆಗೆ ಈಜಲು ತೆರಳಿದ್ದರು.

ತಂದೆ ಹಾಗೂ ನಾಲ್ವರು ಮಕ್ಕಳು ಈಜಾಡುತ್ತಿದ್ದಾಗಲೇ ಆಳಕ್ಕೆ ಸಿಲುಕಿದ್ದ ಮಕ್ಕಳನ್ನು ತಂದೆ ರಕ್ಷಿಸಲು ಹೋದ ಸಂದರ್ಭದಲ್ಲಿ ಸುಳಿಗೆ ಸಿಲುಕಿ ಐವರೂ ನೀರುಪಾಲಾಗಿರುವುದಾಗಿ ಪ್ರತ್ಯಕ್ಷದರ್ಶಿ ಸಂಗಮೇಶ್ ತಿಳಿಸಿದ್ದಾರೆ. . ಪವಿತ್ರ 14), ಪವನಿ (12), ಪೌರ್ಣಿಕಾ, ಆಶೀಶ್(14), ರಾಘವೇಂದ್ರ (35ವರ್ಷ) ಎಂದು ಗುರುತಿಸಲಾಗಿದೆ.

ನೀರುಪಾಲಾದ ಐವರ ಮೃತದೇಹವನ್ನು ಸ್ಥಳೀಯ ಈಜುಗಾರರ ಸಹಾಯದಿಂದ ಮೇಲಕ್ಕೆ ತರಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿರುವುದಾಗಿ ವರದಿ ತಿಳಿಸಿದೆ. ಪ್ರಕರಣ ಗಂಗಾವತಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next