Advertisement

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

12:57 AM Sep 21, 2024 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಸ್ವರ್ಣೋದ್ಯಮ, ಹರಳುಗಳ ವ್ಯಾಪಾರ ವಲಯ ಸೂಕ್ಷ್ಮವಾಗಿದ್ದು, ಈ ಕ್ಷೇತ್ರದ ಮೂಲಕ ಭಯೋತ್ಪಾದನ ಕೃತ್ಯಗಳಿಗೆ ವಿತ್ತೀಯ ನೆರವು ಹರಿದುಹೋಗುವ ಸಾಧ್ಯತೆಯಿದೆ ಎಂದು ಪ್ಯಾರಿಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಉಗ್ರರಿಗೆ ವಿತ್ತೀಯ ನೆರವು ತಡೆ ಕಾರ್ಯಪಡೆ(ಎಫ್ಎಟಿಎಫ್) ಅಭಿಪ್ರಾಯಪಟ್ಟಿದೆ.

Advertisement

ಗುರುವಾರ ಬಿಡುಗಡೆಯಾದ ವರದಿ ಪ್ರಕಾರ, ದೇಶದಲ್ಲಿ ಬೆಲೆಬಾಳುವ ಹರಳುಗಳು, ಚಿನ್ನದ ಡೀಲರ್‌ಗಳು 1.75 ಲಕ್ಷ ಮಂದಿಯಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಈ ಹರಳುಗಳು, ಚಿನ್ನ ವ್ಯಾಪಾ ರದ ಮೂಲಕ ಅಕ್ರಮ ಹಣ ವರ್ಗಾಯಿಸಿ ಉಗ್ರ ಕೃತ್ಯಗಳಿಗೆ ಧನ ಸಹಾಯ ನೀಡುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರಕಾರ ಈ ಕ್ಷೇತ್ರದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಎಫ್ಎಟಿಎಫ್ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next