Advertisement

ಕನ್ನಡಿಗರನ್ನು ಗೊಂದಲಕ್ಕೆ ಸಿಲುಕಿಸಿದ ಕೇರಳ ರಾಜ್ಯ PSC ಪರೀಕ್ಷೆ

07:05 AM Jul 31, 2018 | Karthik A |

ಕಾಸರಗೋಡು: ಕೇರಳ ರಾಜ್ಯ ಪಿ.ಎಸ್‌.ಸಿ. (ಲೋಕ ಸೇವಾ ಆಯೋಗ) ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿನ ತಪ್ಪುಗಳಿಂದಾಗಿ ಕನ್ನಡಿಗ ಅಭ್ಯರ್ಥಿಗಳು ಗೊಂದಲಕ್ಕೆ ಸಿಲುಕಿ ಉತ್ತರಿಸಲಾಗದ ಪರಿಸ್ಥಿತಿ ಉಂಟಾಗಿದೆ. ಜು. 28ರಂದು ಕಾಸರಗೋಡಿನ ವಿವಿಧ ಕೇಂದ್ರಗಳಲ್ಲಿ ನಡೆಸಿದ ಲ್ಯಾಬ್‌ ಅಸಿಸ್ಟೆಂಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಸಾಕಷ್ಟು ತಪ್ಪುಗಳು ಕಂಡು ಬಂದವು. ಇದರಿಂದಾಗಿ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಉತ್ತರಿಸಲು ಸಾಧ್ಯವಾಗಲಿಲ್ಲ. ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಂತಿದ್ದರೆ ಇನ್ನು ಕೆಲವು ಪ್ರಶ್ನೆಗಳೇ ಅರ್ಥವಾಗುವುದಿಲ್ಲ.

Advertisement

ಮಲಯಾಳ ಪ್ರಶ್ನೆ ಪತ್ರಿಕೆಯನ್ನು ಕನ್ನಡಕ್ಕೆ ಭಾಷಾಂತರಿಸುವಾಗ ಆದ ಎಡವಟ್ಟು ಇಂತಹ ಪ್ರಮಾದಕ್ಕೆ ಕಾರಣ. ಈ ಪ್ರಶ್ನೆ ಪತ್ರಿಕೆಯನ್ನು ಕನ್ನಡಿಗರೇ ಭಾಷಾಂತರಿಸಿದರೇ ಅಥವಾ ಅರ್ಧಂಬರ್ಧ ಕನ್ನಡ ಅರಿತ ಮಲಯಾಳಿಗಳಿಂದಾಗಿ ಹೀಗಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಪ್ರಮಾದ ಉದ್ದೇಶಪೂರ್ವಕವೇ ಎಂಬ ಅನುಮಾನವೂ ಉಂಟಾಗಿದೆ. ಕನ್ನಡಿಗರಿಗೆ ಉದ್ಯೋಗ ಲಭಿಸಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿರಬಹುದು ಎಂಬ ಸಂದೇಹವನ್ನು ಅನೇಕ ಕನ್ನಡಿಗರು ವ್ಯಕ್ತಪಡಿಸಿದ್ದಾರೆ.

ಭೈರಪ್ಪ ‘ದಿವಂಗತ’ !
ಕಳೆದ ಸಾಲಿನಲ್ಲೂ ಇದೇ ರೀತಿ ಪ್ರಮಾದವೊಂದನ್ನು ಪಿ.ಎಸ್‌.ಸಿ. ಎಸಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕನ್ನಡದ ಖ್ಯಾತ ಸಾಹಿತಿ ಡಾ| ಎಸ್‌.ಎಲ್‌. ಭೈರಪ್ಪ ಅವರನ್ನು ‘ದಿವಂಗತರ’ ಸಾಲಿಗೆ ಸೇರಿಸಿದೆ. ‘ದಾಟು’ ಕಾದಂಬರಿಯ ಲೇಖಕ ಯಾರು ಎಂಬ ಪ್ರಶ್ನೆಯೊಂದಿದ್ದು, ಉತ್ತರವಾಗಿ 4 ಆಯ್ಕೆಗಳನ್ನು ನೀಡಲಾಗಿದೆ. ಈ ಪೈಕಿ ಮೂವರು ಸಾಹಿತಿಗಳು ದಿವಂಗತರು. ಸರಿಯಾದ ಆಯ್ಕೆಯಾದ ಎಸ್‌.ಎಲ್‌. ಭೈರಪ್ಪ ಹೆಸರಿನ ಹಿಂದೆ ‘ದಿವಂಗತ’ ಎಂದು ಉಲ್ಲೇಖೀಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next