Advertisement

ನಾಯ್ಡು ವಾಹನಕ್ಕೆ ಚಪ್ಪಲಿ ಎಸೆದ ರೈತರು

09:45 AM Nov 29, 2019 | Team Udayavani |

ಅಮರಾವತಿ: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಗುರುವಾರ ಅಮರಾವತಿ ಭೇಟಿ ವೇಳೆ ಭಾರಿ ಮುಖಭಂಗ ಅನುಭವಿಸಬೇಕಾಯಿತು.

Advertisement

ಉದ್ರಿಕ್ತಗೊಂಡಿದ್ದ ರೈತರು ಅವರ ವಾಹನದ ಕಡೆಗೆ ಚಪ್ಪಲಿ ಎಸೆದರು ಮತ್ತು “ಗೋ ಬ್ಯಾಕ್‌’ ಘೋಷಣೆ ಮೂಲಕ ಅವರನ್ನು ಅವಮಾನಿಸಿದರು.

ಅಮರಾವತಿಯಲ್ಲಿ ಸ್ಟಾರ್ಟಪ್‌ ಕಂಪನಿಗಾಗಿ ನೀಡಿದ್ದ ಭೂಮಿಯನ್ನು ಸರ್ಕಾರ ರದ್ದುಗೊಳಿಸಿದ್ದು ಸೇರಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಈ ಕುರಿತು ಅವಲೋಕನ ನಡೆಸಲು ಮತ್ತು ನಗರದ ಅಭಿವೃದ್ಧಿಗಾಗಿ ಭೂಮಿ ನೀಡಿದ ರೈತರ ಜೊತೆ ಸಂವಾದ ನಡೆಸಲು ನಾಯ್ಡು ಆಗಮಿಸಿದ್ದರು. ಈ ವೇಳೆ ರೈತರು ನಾಯ್ಡು ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಮರಾವತಿಯ ಕನಸಿನಿಂದ ತಮ್ಮ ಭೂಮಿಯನ್ನು ನೀಡಿದ್ದ ರೈತರಿಗೆ ಅಮರಾವತಿಯ ಆಸೆಯೂ ಈಡೇರದ್ದು ಹಾಗೂ ಸೂಕ್ತ ಪರಿಹಾರ ಸಿಗದೇ ಇರುವುದು ನಿರಾಸೆ ಮೂಡಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next