Advertisement

ಎಕ್ಸಿಸ್‌ ಬ್ಯಾಂಕ್‌ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆ

06:05 AM Nov 19, 2018 | |

ದೇವದುರ್ಗ: ಪಟ್ಟಣದ ಎಕ್ಸಿಸ್‌ ಬ್ಯಾಂಕ್‌ನಿಂದ ಸಾಲ ಪಡೆದ ತಾಲೂಕಿನ ಬೆಣಕಲ್‌ ಗ್ರಾಮದ ರೈತನಿಗೆ ಸಾಲ ಮರು ಪಾವತಿಗೆ ನೋಟಿಸ್‌ ನೀಡಿದ್ದರಿಂದ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ. 

Advertisement

ಬೆಣಕಲ್‌ ಗ್ರಾಮದ ರಾಮಪ್ಪ ಚಂದ್ರಾಮಪ್ಪ ತಳವಾರ (30) ಮೃತ ರೈತ. ಈತ ತನ್ನ ತಂದೆ ಹೆಸರಿನಲ್ಲಿದ್ದ ಭೂಮಿ ಮೇಲೆ ದೇವದುರ್ಗ ಎಕ್ಸಿಸ್‌ ಬ್ಯಾಂಕ್‌ ಶಾಖೆಯಲ್ಲಿ 10 ಲಕ್ಷ ರೂ. ಸಾಲ ಪಡೆದಿದ್ದ. ಜಮೀನಿನಲ್ಲಿ ಭತ್ತ ಬೆಳೆದಿದ್ದ. ನಿರಂತರ ಬೆಳೆ ಹಾನಿಯಿಂದ ಕಂಗೆಟ್ಟು ಮತ್ತು ಎಕ್ಸಿಸ್‌ ಬ್ಯಾಂಕ್‌ ಸಾಲ ವಸೂಲಿಗೆ ನೋಟಿಸ್‌ ನೀಡಿದ್ದರಿಂದ ಬೇಸತ್ತು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದಾನೆ ಎನ್ನಲಾಗಿದೆ.

ಮೃತ ರೈತನಿಗೆ ಐವರು ಪುತ್ರಿಯರಿದ್ದಾರೆ. ಪತ್ನಿ ಯಲ್ಲಮ್ಮ ನೀಡಿದ ದೂರಿನ ಮೇರೆಗೆ ದೇವ ದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಂಬೈ ಎಕ್ಸಿಸ್‌ ಬ್ಯಾಂಕ್‌ ಕೇಂದ್ರ ಕಚೇರಿ ಪರವಾಗಿ ಹೈಕೋರ್ಟ್‌ ವಕೀಲ ಓ.ಎಂ. ಗುಜರಿ ಮೃತ ರೈತನ ತಂದೆ ಚಂದ್ರಾಮಪ್ಪ ಅವರಿಗೆ ಸಾಲ ಮರುಪಾವತಿಗೆ ನೋಟಿಸ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next