Advertisement

ರೈತರ ಆತ್ಮಹತ್ಯೆ: ತಂದೆ ರಕ್ಷಿಸಲು ಮುಂದಾದ ಮಗನೂ ನೀರುಪಾಲು 

06:50 AM Nov 23, 2018 | Team Udayavani |

ಎನ್‌.ಆರ್‌.ಪುರ/ಬಂಕಾಪುರ: ರಾಜ್ಯದ ವಿವಿಧೆಡೆ ಸಾಲಬಾಧೆಗೆ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ತಂದೆಯನ್ನು ರಕ್ಷಿಸಲು ಹೋದ ಯುವಕನೂ ನೀರು ಪಾಲಾದ ಘಟನೆ ನಡೆದಿದೆ.

Advertisement

ಎನ್‌.ಆರ್‌.ಪುರ ತಾಲೂಕಿನ ಹೊನ್ನೇಕುಡಿಗೆ ಗ್ರಾಮದ ತಿಮ್ಮಣ್ಣಗೌಡ (54) ಎಂಬುವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ, ತಂದೆ ರಕ್ಷಿಸಲು ಹೋದ ಪುತ್ರ ಅಭಿಷೇಕ್‌ (24) ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ತಿಮ್ಮಣ್ಣ ಗೌಡ ಸಾಲೂರು ಗ್ರಾಮದಲ್ಲಿ 2 ಎಕರೆ ಜಮೀನು ಹೊಂದಿದ್ದು, ಕೃಷಿ ಕಾರ್ಯಕ್ಕಾಗಿ ಎನ್‌.ಆರ್‌. ಪುರದ ರಾಷ್ಟ್ರೀಕೃತ ಬ್ಯಾಂಕ್‌ವೊಂದರ ಶಾಖೆಯಲ್ಲಿ 3 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಜಮೀನಿನಲ್ಲಿ ಬಾಳೆ, ಶುಂಠಿ, ಭತ್ತ ಬೆಳೆದಿದ್ದರು. ಆದರೆ ಬೆಳೆ ನಷ್ಟವಾಗಿತ್ತು. ಬುಧವಾರ ರಾತ್ರಿ ಕುಟುಂಬದವರೊಂದಿಗೆ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಸಾಲದ ಬಗ್ಗೆ ಪ್ರಸ್ತಾಪಿಸಿದ ತಿಮ್ಮಣ್ಣಗೌಡ ಸಾಲ ತೀರಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಏಕಾಏಕಿ ಎದ್ದು ಓಡಿ ಹೋಗಿದ್ದಾರೆ. ಇದರಿಂದ ಗಾಬರಿಗೊಂಡ
ಮಗ ಅಭಿಷೇಕ್‌ ಸಹ ತಂದೆಯನ್ನು ಹಿಂಬಾಲಿಸಿದ್ದಾರೆ.

ತಂದೆ ಕೆರೆಗೆ ಹಾರಿದ್ದನ್ನು ನೋಡಿದ ಅಭಿಷೇಕ್‌ ಅವರನ್ನು ರಕ್ಷಿಸಲು ತಾನೂ ಕೆರೆಗೆ ಹಾರಿದ್ದಾನೆ. ಹಾವೇರಿ ಜಿಲ್ಲೆ ಬಂಕಾಪುರ ಸಮೀಪದ ಹುಲಿಕಟ್ಟಿ ಗ್ರಾಮದ ರಮೇಶ ಬಸವಣ್ಣೆಪ್ಪ ಪೂಜಾರ (46) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರೈತ 3 ಎಕರೆ ಜಮೀನು ಹೊಂದಿದ್ದ. ಈ ಬಾರಿ ಹತ್ತಿ, ಗೋವಿನಜೋಳ ಬೆಳೆದಿದ್ದ. ಇಲ್ಲಿಯ ಕೆನರಾ ಬ್ಯಾಂಕಿನಲ್ಲಿ 75 ಸಾವಿರ ಸಾಲ, ಕೆವಿಜಿ
ಬ್ಯಾಂಕಿನಲ್ಲಿ 1ಲಕ್ಷ ಸೇರಿದಂತೆ ಕೈಗಡ ಎರಡು ಲಕ್ಷಕ್ಕಿಂತ ಅಧಿಕ ಸಾಲ ಮಾಡಿರುವುದಾಗಿ ತಿಳಿದು ಬಂದಿದೆ.ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next