Advertisement

ರೈತ ಪ್ರತಿಭಟನೆಯಲ್ಲಿ ಕ್ರಿಮಿನಲ್ ಗಳು ಸೇರಿ ತಾಲಿಬಾನ್ ವರ್ತನೆ: ಬಿಜೆಪಿ

01:17 PM Oct 16, 2021 | Team Udayavani |

ಹೊಸದಿಲ್ಲಿ : ‘ರೈತರ ಪ್ರತಿಭಟನೆಯಲ್ಲಿ ಕ್ರಿಮಿನಲ್ ಗಳು ಸೇರಿಕೊಂಡಿದ್ದು, ತಾಲಿಬಾನ್ ರೀತಿಯಲ್ಲಿ ವರ್ತನೆ ತೋರುತ್ತಿದ್ದಾರೆ’ ಎಂದು ಬಿಜೆಪಿ ನಾಯಕ ದುಷ್ಯಂತ್ ಕುಮಾರ್ ಗೌತಮ್  ಕಿಡಿ ಕಾರಿದ್ದಾರೆ.

Advertisement

ದಿಲ್ಲಿ- ಹರಿಯಾಣದ ಸಿಂಘು ಗಡಿಯಲ್ಲಿ 36 ವರ್ಷದ ದಲಿತ ವ್ಯಕ್ತಿ ಯೊಬ್ಬನನ್ನು ಅಮಾನುಷವಾಗಿ ಹತ್ಯೆಗೈದು, ಬ್ಯಾರಿಕೇಡ್‌ಗೆ ನೇತು ಹಾಕಿರುವ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ದುಷ್ಯಂತ್ ಕುಮಾರ್ ಗೌತಮ್ ಈ ಹೇಳಿಕೆ ನೀಡಿದ್ದಾರೆ.

‘ರೈತ ಹೋರಾಟವನ್ನು ಕೆಲ ಕ್ರಿಮಿನಲ್ ಗಳು ಕೈಗೆತ್ತಿಕೊಂಡಿದ್ದು ತಾಲಿಬಾನ್ ರೀತಿಯಲ್ಲಿ ವರ್ತನೆ ತೋರುತ್ತಿದ್ದಾರೆ. ಈ ಹಿಂದೆ ಮಹಿಳೆಯೊಬ್ಬರನ್ನು ಅತ್ಯಾಚಾರ ಎಸಗಿ ಹತ್ಯೆಗೈಯಲಾಯಿತು, ರೈತರ ಪ್ರತಿಭಟನಾ ಸ್ಥಳಗಳಲ್ಲಿ ಇಂತಹ ದುಷ್ಕ್ರತ್ಯಗಳು ಹೆಚ್ಚುತ್ತಿರುವುದು ತಾಲಿಬಾನ್ ವರ್ತನೆಗೆ ಸಾಕ್ಷಿಯಾಗಿದೆ’ ಎಂದು ದುಷ್ಯಂತ್ ಕುಮಾರ್ ಗೌತಮ್ ಅಭಿಪ್ರಾಯ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಯಾಕೆ ದಲಿತ ವ್ಯಕ್ತಿಯ ಹತ್ಯೆಯ ವಿಚಾರದಲ್ಲಿ ಮೌನವಾಗಿದೆ, ರಾಜಸ್ಥಾನದಲ್ಲಿ, ಛತ್ತೀಸಘಡದಲ್ಲಿ ಹಲವು ದಲಿತರ ಮೇಲೆ ದಾಳಿಗಳಾಗಿವೆ ಆ ಬಗ್ಗೆ ಕಾಂಗ್ರೆಸ್ ಯಾಕೆ ಹೋರಾಟ ನಡೆಸುತ್ತಿಲ್ಲ’ ಎಂದು ಪಂಜಾಬ್ ಬಿಜೆಪಿ ಉಸ್ತುವಾರಿಯಾಗಿರುವ ದುಷ್ಯಂತ್ ಕುಮಾರ್ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next