Advertisement

ಕಾರ್ಖಾನೆಗೆ ಬೀಗ ಜಡಿದು ರೈತರ ಪ್ರತಿಭಟನೆ 

04:48 PM Nov 19, 2018 | Team Udayavani |

ಬೀಳಗಿ: ಕಬ್ಬಿಗೆ ಯೋಗ್ಯ ದರ ನಿಗದಿ ಮಾಡುವವರೆಗೆ ಕಾರ್ಖಾನೆ ಆರಂಭಿಸಬಾರದು ಎಂದು ರೈತರ ತೀವ್ರ ವಿರೋಧದ ಮಧ್ಯೆಯೂ ರವಿವಾರ ಜೆಮ್‌ ಸಕ್ಕರೆ ಕಾರ್ಖಾನೆ ಆರಂಭಗೊಂಡಿದ್ದರಿಂದ ರೈತರು ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಕಬ್ಬಿಗೆ ಮೊದಲು ಯೋಗ್ಯ ದರ ನಿಗದಿ ಮಾಡಬೇಕು. ಅಲ್ಲಿಯವರೆಗೆ ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲವೆಂದು ಶನಿವಾರ ರೈತರು ಬಿಗಿಪಟ್ಟು ಹಿಡಿದಿದ್ದರು. ರೈತರು ಹಾಗೂ ಕಾರ್ಖಾನೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

Advertisement

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಸಿಪಿಐ ರವಿಚಂದ್ರ ಡಿ.ಬಿ. ಮಧ್ಯಪ್ರವೇಶಿಸಿ ರೈತ ಮುಖಂಡರ ಮತ್ತು ಕಾರ್ಖಾನೆ ಅಧಿ ಕಾರಿಗಳ ನಡುವೆ ಸಂಧಾನ ಮಾಡುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದ್ದರು. ಆದರೆ, ಸಂಧಾನದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳದ ಕಾರ್ಖಾನೆ ಅಧಿಕಾರಿಗಳು ರವಿವಾರ ಕಾರ್ಖಾನೆ ಆರಂಭಿಸಿದ್ದರು. ಕಾರ್ಖಾನೆ ಆರಂಭಿಸಿರುವ ವಿಷಯ ತಿಳಿದ ನೂರಾರು ರೈತರು ರವಿವಾರ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಪೊಲೀಸರು ಮತ್ತೆ ರೈತರು ಮತ್ತು ಕಾರ್ಖಾನೆ ಅಧಿಕಾರಿಗಳ ಮಧ್ಯೆ ಸಂಧಾನಕ್ಕೆ ಮುಂದಾಗಿದ್ದಾರೆ. ಪೊಲೀಸರ ಮಾತಿಗೆ ಸೊಪ್ಪು ಹಾಕದ ರೈತರು ಇನ್ನಷ್ಟು ರೊಚ್ಚಿಗೆದ್ದು ಕಾರ್ಖಾನೆ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆಗೆ ಮುಂದಾದರು.

ಸಮಸ್ಯೆ ಇತ್ಯರ್ಥವಾಗುವವರೆಗೆ ಕಬ್ಬು ಅರೆಯುವುದನ್ನು ಸ್ಥಗಿತಗೊಳಿಸಬೇಕು ಎಂದು ರೈತರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಇದೆ ವೇಳೆ ಮತ್ತೂಂದು ಕಾರ್ಖಾನೆಗೆ ಕಬ್ಬು ಸಾಗಿಸುತ್ತಿರುವ ಟ್ಯಾಕ್ಟರ್‌ ತಡೆದ ರೈತರು ರಸ್ತೆ ಮಧ್ಯೆಯೇ ಟ್ಯಾಕ್ಟರ್‌ ಪಲ್ಟಿ ಮಾಡಿದ ಘಟನೆ ತಾಲೂಕಿನ ಜಾನಮಟ್ಟಿ ಹತ್ತಿರ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next