Advertisement

ವಿವಿಧ ರೈತಪರ ಸಂಘಟನೆಗಳಿಂದ ರಸ್ತೆ ಸರಪಳಿ

01:38 PM Sep 29, 2020 | Suhan S |

ಬೇತಮಂಗಲ: ಕೇಂದ್ರ-ರಾಜ್ಯ ಸರ್ಕಾರಗಳು ಭೂ ಸುಧಾರಣಾ ಕಾಯಿದೆ, ಎಪಿಎಂಸಿ ಹಾಗೂ ವಿದ್ಯುತ್‌ ಶಕ್ತಿ ತಿದ್ದುಪಡಿಗೆ ಮುಂದಾಗಿರುವುದನ್ನು ವಿರೋಧಿಸಿ ಸೋಮವಾರ ವಿವಿಧ ರೈತಪರ ಸಂಘಟನೆಗಳಿಂದ ನಡೆದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಬೇತಮಂಗಲ ಬಸ್‌ ನಿಲ್ದಾಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು ಬಂದ್‌ ಮಾಡಲಾಗಿತ್ತು. ರೈತ ಸಂಘ, ಹಸಿರು ಸೇನೆ,ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಸ್ತೆ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆಕೂಗಲಾಯಿತು.

ಉಗ್ರ ಹೋರಾಟದ ಎಚ್ಚರಿಕೆ: ಸರ್ಕಾರಗಳುಕಾಯಿದೆ ತಿದ್ದುಪಡಿಗೆ ಮುಂದಾಗಿರುವ ನಿರ್ಧಾರ ಶೀಘ್ರವಾಗಿ ವಾಪಸ್‌ ಪಡೆಯಬೇಕು, ಇಲ್ಲದಿದ್ದರೆ ಬೀದಿಗೆ ಇಳಿದು ಹೋರಾಟ ಕೈಗೊಳ್ಳುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಹುಲ್ಕೂರು ಹರೀಕುಮಾರ್‌ ಎಚ್ಚರಿಸಿದರು.

ಬಿಜೆಪಿ ಸರ್ಕಾರಗಳು ಅಧಿಕಾರದ ದುರಾಸೆ ಬಿಟ್ಟು ರೈತರ ಹಿತದೃಷ್ಟಿಯಿಂದ ಶ್ರಮಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಠಕಲಿಸಬೇಕಾಗುತ್ತದೆ ಎಂದು ದೂರಿದರು.ಕೇಂದ್ರ-ರಾಜ್ಯ ಸರ್ಕಾರಗಳಕೈಗೊಳ್ಳುತ್ತಿರುವಕಾಯಿದೆ ರೈತರ ಪಾಲಿಗೆ ಮರಣ ಶಾಸನ.ಕಾಯಿದೆ ತಿದ್ದುಪಡಿ ವಿರೋಧಕ್ಕೆ ರೈತ ಸಂಘಗಳ ಜತೆಗೆಕೈ ಜೋಡಿಸಿ ಉಗ್ರ ಹೋರಾಟಕ್ಕೆ ಸಿದ್ಧವೆಂದು ಶಾಸಕಿ ಎಂ.ರೂಪಕಲಾ ಶಶಿಧರ್‌ ಹೇಳಿದರು.

ಕೋವಿಡ್ ಸಂದರ್ಭದಲ್ಲಿ ರೈತರ ಕಷ್ಟಕ್ಕೆ ನಿಲ್ಲಬೇಕಾದ ಸರ್ಕಾರಗಳು, ರೈತ ಸಂಕುಲದ ನಾಶಕ್ಕೆ ಮುಂದಾಗಿರುವುದು ದುರಾದೃಷ್ಟಕರ ಎಂದರು.ಜಿಪಂ ಮಾಜಿ ಸದಸ್ಯ

Advertisement

ಅ.ಮು.ಲಕ್ಷ್ಮೀ ನಾರಾಯಣ, ನಾರಾಯಣಸ್ವಾಮಿ, ಎಪಿಎಂಸಿ ಅಧ್ಯಕ್ಷ ವಿಜಯ ರಾಘವರೆಡ್ಡಿ, ಮಾಜಿ ಅಧ್ಯಕ್ಷ ವಿ.ಜಿ.ಶಂಕರ್‌, ಕಾಂಗ್ರೆಸ್‌ ಜಿಲ್ಲಾ ಪ್ರಧಾನಕಾರ್ಯದರ್ಶಿ ಪದ್ಮನಾಭರೆಡ್ಡಿ, ತಾಪಂ ಸದಸ್ಯ ಜಯರಾಮರೆಡ್ಡಿ, ಗ್ರಾಪಂ ಸದಸ್ಯರಾದ ವಿನುಕಾರ್ತಿಕ್‌, ಡೇರಿ ಮಂಜುನಾಥ್‌, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ವಡ್ಡಹಳ್ಳಿ ಮಂಜುನಾಥ್‌, ಸಹಕಾರ್ಯದರ್ಶಿ ಕಾರಿ ಮಂಜುನಾಥ್‌,ಕಾರಿ ವಿಶ್ವನಾಥ್‌, ವಡ್ಡಹಳ್ಳಿ ಲಕ್ಷ್ಮೀ ನಾರಾಯಣ್‌,ಕರವೇ ಮಾಜಿ ಜಿಲ್ಲಾಧ್ಯಕ್ಷಕೋದಂಡಪ್ಪ, ಸುಬ್ರಹ್ಮಣಿ, ಗಣೇಶ್‌, ತಂಬಾರ‌್ಲಹಳ್ಳಿ ಮುನೇಗೌಡ, ಒಬಿಸಿ ಮುನಿಸ್ವಾಮಿ ಮತ್ತಿತರರಿದ್ದರು.

 

ಕೆಜಿಎಫ್ ಬಂದ್‌ಯಶಸ್ವಿ :

ಕೆಜಿಎಫ್: ಕೇಂದ್ರ-ರಾಜ್ಯ ಸರ್ಕಾರಗಳುಕೃಷಿ ಮತ್ತು ಎಪಿಎಂಸಿಗೆ ಸಂಬಂಧಿಸಿದಂತೆ ಹೊರಡಿಸಿರುವ ತಿದ್ದುಪಡಿ ಮಸೂದೆಖಂಡಿಸಿ ವಿವಿಧ ಸಂಘಟನೆಗಳು ಸೋಮವಾರ ಕರೆ ನೀಡಿದ್ದಕೆಜಿಎಫ್ ಬಂದ್‌ ಸಂಪೂರ್ಣವಾಗಿ ಯಶಸ್ವಿಯಾಯಿತು.

ಬಂದ್‌ ಪ್ರಯುಕ್ತ ನಗರದ ಜನಜೀವನ ಅಸ್ತವ್ಯಸ್ತವಾಗಿತ್ತು. ಹೋಟೆಲ್‌, ಅಂಗಡಿ ಮುಂಗಟ್ಟು, ಸರ್ಕಾರಿ ಕಚೇರಿ, ಬ್ಯಾಂಕ್‌ ಮುಚ್ಚಿದ್ದವು. ರಾಬರ್ಟ್‌ಸನ್‌ಪೇಟೆ ಮತ್ತು ಆ್ಯಂಡರ್ಸನ್‌ಪೇಟೆ ಮಾರುಕಟ್ಟೆ ಮುಚ್ಚಿದ್ದವು. ಖಾಸಗಿ, ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಮಾಡಲಿಲ್ಲ. ಆಟೋ ಬೀದಿಗೆ ಇಳಿಯಲಿಲ್ಲ. ರೈತ ಸಂಘದ ಕಾರ್ಯಕರ್ತರು ರ್ಯಾಲಿ ನಡೆಸಿದರು. ರೈತ ಮುಖಂಡರಾದ ಹರಿಕುಮಾರ್‌, ಕಾರಿ ವಿಶ್ವನಾಥ್‌, ಲಕ್ಷ್ಮೀ ನಾರಾಯಣ, ಸುಬ್ರಹ್ಮಣಿ, ಕರ್ನಾಟಕ ರಕ್ಷಣಾ ವೇದಿಕೆಕೋದಂಡರಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಸಿಪಿಎಂ ನಗರಸಭೆ ಸದಸ್ಯ ಪಿ.ತಂಗರಾಜ್‌ ನೇತೃತ್ವದಲ್ಲಿ ಸಿಪಿಎಂಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಶಾಸಕಿ ಎಂ.ರೂಪಕಲಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಕರನ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next