Advertisement

ಟ್ರ್ಯಾಕ್ಟರ್‌ ಪರೇಡ್‌ಗೆ ಹೊರಟ ರೈತರು

08:09 PM Jan 21, 2021 | Team Udayavani |

ಮೈಸೂರು: ದೆಹಲಿಯಲ್ಲಿ ಜ.26ರಂದು ನಡೆಯುವ ಪ್ರತಿಭಟನಾಕಾರರ ಟ್ರ್ಯಾಕ್ಟರ್‌ ಪರೇಡ್‌ನ‌ಲ್ಲಿ ಭಾಗವಹಿಸಲು ಮೈಸೂರಿನಿಂದ ಹೊರಟ ರೈತರಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಐಕ್ಯ ಹೋರಾಟ ಸಮಿತಿ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.

Advertisement

ನಗರದ ಗನ್‌ಹೌಸ್‌ ಬಳಿ ಇರುವ ಕುವೆಂಪು ವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಹಾಸನದ ರೈತ ಮುಖಂಡ ಅರಳಾಪುರ ಮಂಜೇಗೌಡ ನೇತೃತ್ವದಲ್ಲಿ ಹಾಸನ, ಮಂಡ್ಯ, ಚಾಮರಾಜನಗರ ಮತ್ತು ಮೈಸೂರು ಭಾಗದಿಂದ ಹೊರಟ ರೈತರಿಗೆ ಬೀಳ್ಕೊಡುಗೆ ನೀಡಲಾಯಿತು. ಮೈಸೂರಿನಿಂದ ಹೊರಟ ರೈತರು ಚಾಮರಾಜನಗರದ ಅಮೃತಭೂಮಿಯಲ್ಲಿರುವ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸಮಾಧಿಗೆ ನಮಸ್ಕರಿಸಿ ದೆಹಲಿ ಕಡೆಗೆ ತೆರಳಿದರು. ರೈತರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ, ಆತ್ಮಸ್ಥೆçರ್ಯ ತುಂಬಿ, ದಿನಸಿ, ಅವಶ್ಯಕ ವಸ್ತುಗಳನ್ನು ನೀಡಿ ಕಳುಹಿಸಿಕೊಡಲಾಯಿತು.

ಈ ವೇಳೆ ರೈತ ಮುಖಂಡ ಅರಳಾಪುರ ಮಂಜೇಗೌಡ ಮಾತನಾಡಿ, ಕೊರೆಯುವ ಚಳಿಯಲ್ಲೂ ಎರಡು ತಿಂಗಳಿಂದ ಪಂಜಾಬ್‌ ಮತ್ತು ಹರಿಯಾಣ ರೈತರು ಧರಣಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಸೂಕ್ತ ಸ್ಪಂದನೆ ದೊರೆಯದ ಕಾರಣ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್‌ ಪರೇಡ್‌ ನಡೆಸಲಿದ್ದಾರೆ. ಈ ಹೋರಾಟದಲ್ಲಿ ಕರ್ನಾಟಕದಿಂದ ನೂರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುತ್ತಿದ್ದಾರೆ. ಬುಧವಾರ ಚನ್ನರಾಯಪಟ್ಟಣಕ್ಕೆ ತೆರಳಿ, ಅಲ್ಲಿರುವ ರೈತರ ಜೊತೆಗೂಡಿ ಗುರುವಾರ ದೆಹಲಿಗೆ ಪ್ರಯಾಣ ಆರಂಭಿಸಲಾಗುವುದು ಎಂದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮಾತನಾಡಿ, ಜನವರಿ ಬಳಿಕ ಚಳಿ ಕಡಿಮೆಯಾಗಲಿದ್ದು, ಆಗ ರಾಜ್ಯದಿಂದಲೂ ಇನ್ನಷ್ಟು ರೈತರು ದೆಹಲಿಗೆ ತೆರಳಿದ್ದಾರೆ. ಈಗಾಗಲೇ ತಮಿಳುನಾಡು ಮತ್ತು ಕೇರಳದಿಂದ ರೈತರು ಹೊರಡುತ್ತಿದ್ದಾರೆ. ಅದೇ ರೀತಿ ಫೆಬ್ರವರಿಯಲ್ಲಿ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ರೈತ ಮುಖಂಡ ಪ್ರಸನ್ನ ಗೌಡ, ಅತ್ತಹಳ್ಳಿ ದೇವರಾಜು, ಪಿ.ಮರಂಕಯ್ಯ ಸೇರಿದಂತೆ ಹಲವರು ಇದ್ದರು.

ಇದನ್ನೂ ಓದಿ:ಆಲೂಗಡ್ಡೆ ಅಂಗಾಂಶ ಕೃಷಿ ಕ್ಷೇತ್ರೋತ್ಸವ

Advertisement

ನಾಲ್ಕು ಟೆಂಪೋದಲ್ಲಿ 100 ಮಂದಿ ಪಯಣ

100 ಮಂದಿ ರೈತರು ನಾಲ್ಕು ಟೆಂಪೋಗಳಲ್ಲಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದೇವೆ. ಟೆಂಪೋದಲ್ಲಿ ಮಲಗಲು ಹಾಸಿಗೆ, ಸೇರಿದಂತೆ ಅವಶ್ಯ ವಸ್ತುಗಳನ್ನು

ಶೇಖರಿಸಿಕೊಂಡಿದ್ದೇವೆ. ಐದು ದಿನಗಳ ಕಾಲ ಪ್ರಯಾಣಿಸಿ ಜ.25ಕ್ಕೆ ದೆಹಲಿ ತಲುಪಲಿದ್ದೇವೆ. ಇವೆರಡು ಟೆಂಪೋದೊಂದಿಗೆ ಮೂರು ಕಾರು ಸಹ ದೆಹಲಿಗೆ ತೆರಳಲಿದೆ. 2ನೇ ಹಂತದಲ್ಲಿ ರಾಜ್ಯದ ವಿವಿಧ ಭಾಗದ 300 ರೈತರು ಜ.23ಕ್ಕೆ ಹೊರಟು ರೈಲಿನ ಮೂಲಕ ದೆಹಲಿಗೆ ಆಗಮಿಸಲಿದ್ದಾರೆ. ಗಣರಾಜ್ಯೋತ್ಸವ ಪರೇಡ್‌ ಬೆಂಬಲಿಸಿ ಬೆಂಗಳೂರಿನಲ್ಲಿ ನಡೆಯಲಿರುವ ರ್ಯಾಲಿ ಪ್ರಯುಕ್ತ ಐಕ್ಯ ಹೋರಾಟದಿಂದ ಬೈಕ್‌ ರ್ಯಾಲಿ ಪರೇಡ್‌ ನಡೆಸಲಾಗುವುದು ಎಂದು ರೈತ ಮುಖಂಡ ಅರಳಾಪುರ ಮಂಜೇಗೌಡ ತಿಳಿಸಿದರು.

ಅಗತ್ಯ ವಸ್ತುಗಳ ವಿತರಣೆ

ಬೀಳ್ಕೊಡುಗೆ ವೇಳೆ ರೈತರಿಗೆ 50 ಲೀಟರ್‌ ಡೀಸೆಲ್‌, 50 ಕೆ.ಜಿ. ಅಕ್ಕಿ, ತೆಂಗಿನಕಾಯಿ ಮತ್ತು ತರಕಾರಿ 25 ಕೆ.ಜಿ.ಗೂ ಅಧಿಕ, 5 ಸಾವಿರ ರೂ. ನಗದು ಹಾಗೂ ಅಕ್ಷರ ದಾಸೋಹ ಸಂಸ್ಥೆಯ ರಾಜೇಂದ್ರ ಅವರಿಂದ ನೂರು ಮಂದಿಗೆ ಆಗುವಷ್ಟು ಸೋಪು, ಬ್ರಶ್‌ ಇತ್ಯಾದಿ ವಸ್ತುಗಳನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next