Advertisement

ನಮ್ಮ ಶಕ್ತಿ ಪ್ರದರ್ಶನಕ್ಕೆ ಅವಕಾಶ ನೀಡಬೇಡಿ: ರೈತ ಮುಖಂಡ ಬಾಬಾಗೌಡ ಪಾಟೀಲ

02:49 PM Jan 26, 2021 | Team Udayavani |

ಬೆಳಗಾವಿ: ನಮ್ಮ ನಿಜವಾದ ಶಕ್ತಿಯ ಅರಿವು ನಿಮಗೆ ಇನ್ನೂ ಆಗಿಲ್ಲ. ನಾವು ಶಕ್ತಿಯ ಪ್ರಯೋಗ ಮಾಡಿಲ್ಲ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಬಾಬಾಗೌಡ ಪಾಟೀಲ ಗುಡುಗಿದರು.

Advertisement

ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತ ವಿರೋಧಿ ನೀತಿಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ನಾವು ಸಂಸತ್ ಗೆ ಹಾಗೂ ಅಧಿಕಾರಿಗಳಿಗೆ ಊಟ ಹಾಕಿದ್ದೇವೆ. ನಮಗೆ ದ್ರೋಹ ಮಾಡಬೇಡಿ. ನಾವು ಎದ್ದುನಿಂತರೆ ನೀವು ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ಕಲಬುರಗಿಯಲ್ಲಿ ಕೃಷಿ ಕಾಯ್ದೆಗಳ ವಿರೋಧಿಸಿ ಬೃಹತ್ ಜನತಾ ಪರೇಡ್: ಟ್ರ್ಯಾಕ್ಟರ್ ರಾಲಿ

ನಾಜೂಕು ಜನರಿಂದ ಈ ಸರಕಾರ ನಡೆಯುವುದಿಲ್ಲ. ಇವರಿಗೆ ಎಮ್ಮೆ ಕಾದವರು ಬೇಕು. ನೀವು ಆರಿಸಿ ಬರಬೇಕಾದರೆ ನಾವು ರೈತರು ಬೇಕು. ಯಾರೋ ನಾಜೂಕು ಇದ್ದವರು ಮತ ಹಾಕಿದರೆ ಸರಕಾರ ನಡೆಯುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕೆಂಪುಕೋಟೆಗೆ ನುಗ್ಗಿದ ರೈತರು: ಪ್ರಧಾನಿ ಧ್ವಜಾರೋಹಣ ಮಾಡುವ ಸ್ಥಳದಲ್ಲಿ ರೈತರಿಂದ ಧ್ವಜಾರೋಹಣ!

Advertisement

ನಮಗೆ ಕಾನೂನು ಪಾಠ ಹೇಳಿಕೊಡುವ ಅಧಿಕಾರಿಗಳು ಜನರ ಪ್ರತಿನಿಧಿಗಳು ಎಂಬುದನ್ನು ಮರೆತಿದ್ದಾರೆ. ಪ್ರಚೋದನಕಾರಿ ಭಾಷಣ ಮಾಡಿದರೆ ಬಂಧಿಸುವದಾಗಿ ಬೆದರಿಕೆ ಹಾಕುತ್ತಾರೆ. ಹಾಗಾದರೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ಸವಾಲು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next