Advertisement

ಕೇಂದ್ರ ಸರ್ಕಾರದಿಂದ ರೈತರಿಗೆ ದ್ರೋಹ

03:29 PM Aug 15, 2017 | |

ಶೃಂಗೇರಿ: ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕು. ಬರಿ ಉದ್ಯಮಿಗಳ ಸಾಲವನ್ನು ಮಾಡುವ ಮುಖಾಂತರ ಮೋದಿ ಅವರು ರೈತರಿಗೆ ದ್ರೋಹ ಎಸಗುತ್ತಿದ್ದಾರೆ ಎಂದು ರಾಜ್ಯ ಕಿಸಾನ್‌ ಖೇತ್‌ ಅಧ್ಯಕ್ಷ ಸಚಿನ್‌ ಮೀಗಾ ಆಕ್ಷೇಪಿಸಿದರು.

Advertisement

ಅವರು ಸೋಮವಾರ ತಾಲೂಕಿನ ಕೂತಗೋಡು ಗ್ರಾಪಂನ ಬೋಳೂರು ಸತೀಶ್‌ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದರು. ಮೃತ ಸತೀಶ್‌ ಅವರ ಮನೆಗೆ ಪೊಲೀಸ್‌ ಇಲಾಖೆ ಹಾಗೂ ತಹಶೀಲ್ದಾರ್‌ ಭೇಟಿ ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಲೆನಾಡಿನಲ್ಲಿ ಒಂದು ಅಥವಾ ಎರಡು ಎಕರೆ ತೋಟವುಳ್ಳ ರೈತರ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಸರಕಾರವು ಜಾಯಿಂಟ್‌
ಫಾರ್ಮಿಂಗ್‌ ಎಂಬ ಹೊಸ ಯೋಜನೆ ಪ್ರಾರಂಭ ಮಾಡಬೇಕಿದೆ. ಸಣ್ಣ ಸಣ್ಣ ಹಿಡುವಳಿದಾರರನ್ನು ಒಟ್ಟಾಗಿ ಸೇರಿಸಿ ಸ್ವ-ಸಹಾಯ ಗುಂಪಿನಡಿ ವ್ಯವಸಾಯ ಮಾಡುವ ಪ್ರಕ್ರಿಯೆ ಪ್ರಾರಂಭವಾಗಬೇಕಿದೆ. ಈ ಯೋಜನೆಯಲ್ಲಿ ರೈತರಿಗೆ ಆದಾಯ ಬರುವಂತೆ ಕೇಂದ್ರ ಹಾಗೂ ರಾಜ್ಯ
ಸರಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ತೀವ್ರ ಬರದ ಹಿನ್ನೆಲೆಯಲ್ಲಿ ರೈತರ ಬಡ್ಡಿಮನ್ನಾ ಯೋಜನೆಯ ಅವಧಿ ವಿಸ್ತರಿಸಬೇಕು. ಆರ್ಥಿಕ ಸಂಕಷ್ಟದಲ್ಲಿದ್ದು ಆತ್ಮಹತ್ಯೆ ಮಾಡಿಕೊಂಡ ರೈತ ಸತೀಶ್‌ ಕುಟುಂಬಕ್ಕೆ ಸರಕಾರ ತಕ್ಷಣ ಐದು ಲಕ್ಷ ರೂ.ಪರಿಹಾರ ನೀಡಬೇಕು ಎಂದು 
ಒತ್ತಾಯಿಸಿದರು.

ಬ್ಲಾಕ್‌ ಕಿಸಾನ್‌ ಅಧ್ಯಕ್ಷ ರವಿ ಹೆಗ್ಡೆ, ಎ.ಪಿ.ಎಂ.ಸಿ ಅಧ್ಯಕ್ಷ ರಮೇಶ ಭಟ್‌, ಕೂತಗೋಡು ಗ್ರಾಪಂ ಅಧ್ಯಕ್ಷ ನಾಗೇಶ್‌,ಸುಬ್ರಾಯ ಹೆಗ್ಡೆ, ಲಕ್ಷ್ಮಣ ನಾಯಕ್‌, ನವೀನ್‌, ವೆಂಕಟೇಶ್‌, ಶ್ರೀನಾಥ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next