Advertisement

ಸೂಕ್ತ ಬೆಲೆಯಿಲ್ಲದ ಕಾರಣ ಎರಡು ಎಕರೆ ಎಲೆಕೋಸಿನ ಬೆಳೆ ನಾಶ ಮಾಡಿದ ರೈತ

02:15 PM Mar 23, 2021 | Team Udayavani |

ಚಿಕ್ಕಮಗಳೂರು: ಎಲೆ ಕೋಸಿಗೆ ಸೂಕ್ತ ಬೆಲೆ ಇಲ್ಲದ ಕಾರಣ ನಿರಾಶನಾದ ರೈತ ಟ್ರ್ಯಾಕ್ಟರ್ ಹೊಡಿಸಿ ಎರಡು ಎಕರೆ ಎಲೆ ಕೋಸಿನ ಬೆಳೆ ನಾಶ ಮಾಡಿದ ಘಟನೆ ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ನಡೆದಿದೆ.

Advertisement

ಬಸವರಾಜು ಎನ್ನುವವರೇ ತನ್ನ ಹೊಲಕ್ಕೆ ಟ್ರ್ಯಾಕ್ಟರ್ ಹೊಡೆಸಿದ ರೈತ.

ಇದನ್ನೂ ಓದಿ:ವಿಡಿಯೋ: ನೋಡು ನೋಡುತ್ತಲೇ ದೋಣಿ ಒಳಗಡೆ ಎಂಟ್ರಿ ಕೊಟ್ಟ ಸಮುದ್ರ ಸಿಂಹ

ಇವರು ಕಳೆದೊಂದು ವರ್ಷದಿಂದ ಎಲೆ ಕೋಸು ಬೆಳೆಯುತ್ತಿದ್ದರು. ಮೂರು ಬಾರಿ ಬೆಳೆದರೂ ಸೂಕ್ತ ಬೆಲೆ ಸಿಗಲಿಲ್ಲ. ಈ ಬಾರಿಯೂ 30-40 ಸಾವಿರ ಖರ್ಚು ಮಾಡಿ ಬೆಳೆ ಬೆಳೆದಿದ್ದರು. ಆದರೆ ಈ ಬಾರಿಯೂ ಬೆಲೆ ಇಲ್ಲ ಎಂದು ನೊಂದುಕೊಂಡು ಟ್ರ್ಯಾಕ್ಟರ್ ಹೊಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next