Advertisement

ಈರುಳ್ಳಿ ಬೆಲೆ ದಿಢೀರ್ ಕುಸಿತ; ರೈತರ ಪ್ರತಿಭಟನೆ

06:29 PM Oct 18, 2019 | mahesh |

ಗದಗ: ಸ್ಥಳೀಯ ಎಪಿಎಂಸಿಯಲ್ಲಿ ಈರುಳ್ಳಿ ದಿಢೀರ್ ಕುಸಿದಿರುವುದನ್ನು ಖಂಡಿಸಿ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಆಡಳಿತ ಕಚೇರಿಗೆ ಶುಕ್ರವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಕಚೇರಿ ಒಳಗಿದ್ದ ಕೆಲ ಸಿಬ್ಬಂದಿ ದಿಗ್ಭಂಧನಕ್ಕೆ ಒಳಗಾದರು.

Advertisement

ಜಿಲ್ಲೆಯ ಗದಗ, ರೋಣ ಹಾಗೂ ಕೊಪ್ಪಳದಿಂದ ಸುಮಾರು ೨ ಸಾವಿರ ಕ್ವಿಂಟಾಲ್ ಈರುಳ್ಳಿ ಆವಕವಾಗಿದೆ. ಇದರಿಂದ ಉದ್ದೇಶ ಪೂರ್ವಕವಾಗಿ ಖರೀದಿದಾರರು ಹಾಗೂ ದಲ್ಲಾಳಿಗಳು ಶಾಮೀಲಾಗಿ ಬೆಲೆ ಕಡಿಮೆ ಮಾಡಿದ್ದಾರೆ. ಇದೇ ಮಾರುಕಟ್ಟೆಯಲ್ಲಿ ಗುರುವಾರ ೨೪೦೦ ರೂ. ದರದಲ್ಲಿ ಮಾರಾಟವಾಗಿದ್ದ ಉತ್ಕೃಷ್ಠ ಗುಣಮಟ್ಟದ ಈರುಳ್ಳಿಗೆ ಇಂದು ಕೇವಲ ೧೪,೦೦ ರೂ. ನಿಗದಿಗೊಳಿಸಿದ್ದಾರೆ. ಅದೂ ನಾಲ್ಕೈದು ಕ್ವಿಂಟಾಲ್‌ಗೆ ಮಾತ್ರ. ಇನ್ನುಳಿದಂತೆ ಸಾಮಾನ್ಯ ಗಡ್ಡೆಗೆ ಕೇವಲ ೧೦೦, ೩೦೦, ೫೦೦ ಹಾಗೂ ೮೦೦ ರೂ. ದರ ಕಟ್ಟಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿ, ಧಿಕ್ಕಾರ ಕೂಗಿದರು.

ಬಳಿಕ ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ ಅಧ್ಯಕ್ಷತೆಯಲ್ಲಿ ರೈತರು, ವರ್ತಕರು ಹಾಗೂ ದಲ್ಲಾಳಿಗಳ ಸಮಾಲೋಚನೆ ಸಭೆ ನಡೆಸಿ, ಮರು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next