Advertisement

ಕಚ್ಚಿದ ಬೃಹತ್‌ ಹಾವನ್ನು ತುಂಡು ತುಂಡು ಮಾಡಿ ಪ್ರಾಣ ಬಿಟ್ಟ ರೈತ 

01:34 PM Oct 16, 2018 | |

ಮಂಡ್ಯ: ರೈತನೊಬ್ಬ ತನಗೆ ಕಡಿದ ವಿಷಕಾರಿ ಹಾವನ್ನು ತುಂಡು ತುಂಡು ಮಾಡಿ  ಪ್ರಾಣ ಬಿಟ್ಟ ದಾರುಣ  ಘಟನೆ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ.

Advertisement

ದೊಡ್ಡಚೆನ್ನೀಪುರ ಗ್ರಾಮದ ನಿವಾಸಿಯಾಗಿರುವ  ಪುಟ್ಟಮಾದು(35) ಮೃತ ದುರ್ದೈವಿ. 

ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿದ್ದ  ಪುಟ್ಟಮಾದು ಅವರು ಸೋಮವಾರ ಬೆಳಗ್ಗೆ ರೇಷ್ಮೆ ಹುಳುವಿಗೆ ಹಿಪ್ಪುನೇರಳೆ ಸೊಪ್ಪು ತರಲು ತೋಟಕ್ಕೆ ತೆರಳಿದ್ದ ವೇಳೆ ವಿಷಪೂರಿತ ಕೊಳಕುಮಂಡಲ ಹಾವು ಪುಟ್ಟಮಾದುವಿಗೆ ಕಡಿದಿದೆ. 

ಪುಟ್ಟಮಾದು  ಅವರು ಈ ವೇಳೆ ಉಡುದಾರವನ್ನು ಬಳಸಿ ಕೊಂಡು  ಹಾವು ಕಡಿದ ಮೇಲ್ಬಾಗದಲ್ಲಿ ಕಾಲಿಗೆ ಕಟ್ಟಿಕೊಂಡಿದ್ದಾರೆ.  ಕೈಯಲ್ಲಿದ್ದ ಮಚ್ಚಿನ್ನು ಬಳಸಿ  ಹಾವನ್ನು ತುಂಡು ತುಂಡಾಗಿ ಕತ್ತರಿಸಿ ಕೊಂದಿದ್ದಾರೆ.

ಈ ವೇಳೆ ಜೋರಾಗಿ ಕೂಗಿಕೊಂಡಿದ್ದು,ಸುತ್ತಮುತ್ತಲಿನ ಜಮೀನಿನಲ್ಲಿದ್ದವರು ನೆರವಿಗೆ ಧಾವಿಸಿದ್ದಾರೆ.  ಕೂಡಲೆ ಹಲಗೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವಿಷವೇರಿ ಪುಟ್ಟಮಾದು ಕೊನೆಯುಸಿರೆಳೆದಿದ್ದಾರೆ. 

Advertisement

ಹಲಗೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next