Advertisement

ರಾಜಸ್ಥಾನ : ನೀರಿಗಾಗಿ ಜಗಳ; ರೈತನನ್ನು ಕೊಚ್ಚಿ ಕೊಲೆ

04:20 PM Feb 03, 2018 | udayavani editorial |

ಕೋಟ, ರಾಜಸ್ಥಾನ : ನೀರಾವರಿ ನೀರಿನ ಪಾಲಿಗಾಗಿ ಐವರು ರೈತರ ನಡುವೆ ನಡೆದ ಮಾರಣಾಂತಿಕ ಜಗಳದಲ್ಲಿ ಒಬ್ಬ ರೈತನನ್ನು ಕೊಚ್ಚಿ ಕೊಲ್ಲಲಾದ  ಘಟನೆ ಕೋಟ ಜಿಲ್ಲೆಯ ಝಾಡೋಲ್‌ ಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಐವರು ರೈತರ ಜಗಳದಲ್ಲಿ  ಕೊಲೆಗೀಡಾದ ರೈತನನ್ನು 26ರ ಹರೆಯದ ರಾಮ್‌ ನಿವಾಸ್‌ ಗುಜಾರ್‌ ಎಂದು ಗುರುತಿಸಲಾಗಿದೆ.

ರಾಮ್‌ ನಿವಾಸ್‌ ಗುಜಾರ್‌ನ ಹೊಲಕ್ಕೆ ತಮ್ಮ ಪಾಲಿನ ನೀರಾವರಿ ನೀರನ್ನು ಹಾಯಿಸಲಾಗುತ್ತಿರುವುದಕ್ಕೆ ಕೋಪೋದ್ರಿಕ್ತರಾದ ಇತರ ನಾಲ್ವರು ರೈತರು ಆತನನ್ನು (ಗುಜಾರ್‌ನನ್ನು) ಕೊಚ್ಚಿ ಕೊಂದರು ಎಂದು ಇಟಾವಾ ಪೊಲೀಸ್‌ ಠಾಣೆಯ ಅಧಿಕಾರಿ ಸಂಜಯ್‌ ರೋಯಾಲ್‌ ತಿಳಿಸಿದ್ದಾರೆ.

ಗುಜಾರ್‌ನನ್ನು ಕೊಚ್ಚಿ ಕೊಂದು ಪರಾರಿಯಾಗಿರುವ ನಾಲ್ವರು ರೈತರಿಗಾಗಿ ಪೊಲೀಸರು ಈಗ ವ್ಯಾಪಕ ಶೋಧ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next