Advertisement

ಮಸೀದಿ ನಿರ್ಮಾಣಕ್ಕೆ ಜಾಗ ನೀಡಿ ಭಾವೈಕ್ಯತೆ ಮೆರೆದ ರೈತ ಮುಖಂಡ

04:34 PM May 05, 2022 | Team Udayavani |

ದಾವಣಗೆರೆ: ಕೋಮು ಸಂಘರ್ಷದ ಸುದ್ದಿಯೇ ಹೆಚ್ಚಾಗಿ ಕೇಳಿ ಬರುತ್ತಿರುವ ಇಂದಿನ ದಿನಗಳಲ್ಲಿ ಹಿಂದೂ ಸಮುದಾಯದ ರೈತ ಮುಖಂಡರೊಬ್ಬರು ಮಸೀದಿಗೆ ಭೂಮಿ ನೀಡಿ ಭಾವೈಕ್ಯತೆ ಮರೆದಿದ್ದಾರೆ. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಮಸೀದಿಗೆ ಜಾಗ ನೀಡಿದವರು.

Advertisement

ಬಲ್ಲೂರು ಗ್ರಾಮದಲ್ಲಿರುವ 8-10 ಮುಸ್ಲಿಂ ಕುಟುಂಬದವರಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ಥಳ ಇರಲಿಲ್ಲ. ಹಾಗಾಗಿ ರವಿಕುಮಾರ್‌ ಅವರು ಮಸೀದಿ ನಿರ್ಮಾಣ ಮಾಡಿಕೊಳ್ಳಲು ತಮ್ಮ 40ಗಿ40 ಭೂಮಿ ನೀಡಿದ್ದಾರೆ.

ಕೃತಜ್ಞತಾಪೂರ್ವಕವಾಗಿ ಸಮುದಾಯದವರು ಮಸೀದಿಯ ಗೋಡೆಯಲ್ಲಿ ರವಿಕುಮಾರ್‌ ಅವರ ತಾತ ಬಿ.ಎಂ. ಚನ್ನಯ್ಯ ಅವರ ಹೆಸರಿನ ಫಲಕ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next