Advertisement

ಮಲಪ್ರಭ ನದಿಯಲ್ಲಿ ಕೊಚ್ಚಿಹೋದ ರೈತ : ದೇಹ ಪತ್ತೆಗೆ ರಕ್ಷಣಾ ತಂಡದಿಂದ ಕಾರ್ಯಾಚರಣೆ

07:15 PM Oct 11, 2020 | sudhir |

ಕುಳಗೇರಿ ಕ್ರಾಸ್ (ಬಾಗಲಕೋಟೆ) : ಹೊಲದಿಂದ  ಮನೆಗೆ ತೆರಳುತ್ತಿದ್ದ ರೈತನೋರ್ವ ಮಲಪ್ರಭಾ ನದಿ ದಾಟುವ ಸಮಯದಲ್ಲಿ ಕಾಲು ಜಾರಿ ನೀರಿನ ಸೆಳೆತಕ್ಕೆ ನದಿಯಲ್ಲಿ ಕೊಚ್ಚಿಹೋದ ಘಟನೆ ಜಿಲ್ಲೆಯ ಗಡಿ ಭಾಗ ಗೋವನಕೊಪ್ಪ ಗ್ರಾಮದ ಹಳೆ ಸೇತುವೆ ಬಳಿ ನಡೆದಿದೆ.

Advertisement

ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ವೆಂಕನಗೌಡ ರಾಮನಗೌಡ ಸಾಲಿಗೌಡ್ರ ೪೦ ಎಂಬ ರೈತ ನೀರಿನ ರಬಸಕ್ಕೆ ಕೊಚ್ಚಿ  ಹೋಗಿದ್ದಾನೆ  ಎಂದು ತಿಳಿದು ಬಂದಿದೆ. ಬಾಗಲಕೋಟೆ-ಗದಗ ಸಂಪರ್ಕ ಕಲ್ಪಿಸುವ ಹಳೆ ಸೇತುವೆ  ಮೂಲಕ ದಿನಂಪ್ರತಿ ನದಿ ದಾಟಿ  ತನ್ನ  ಮಿನಿಗೆ ತೆರಳಿ ಕಾಯಕ ಮುಗಿಸಿ ಮರಳುತ್ತಿದ್ದ ವೆಂಕನಗೌಡ ಇಂದು ನದಿ ದಾಟುವ ಸಮಯದಲ್ಲಿ ಕಾಲು ಜಾರಿ ಕೊಚ್ಚಿ ಹೋಗಿದ್ದಾನೆ.

ಇದನ್ನೂ ಓದಿ:ರಾಮಾಪುರ ಪೊಲೀಸರ ಭರ್ಜರಿ ಬೇಟೆ : 154ಕೆ.ಜಿ.ತೂಕದ 228 ಗಾಂಜಾ ಗಿಡ ವಶ

ಠಿಕಾಣಿ ಹೂಡಿದ ಅಧಿಕಾರಿಗಳು:
ಸ್ಥಳಕ್ಕೆ ಬಾದಾಮಿ ತಹಸಿಲ್ದಾರ ಸುಹಾಸ ಇಂಗಳೆ ತಮ್ಮ ಅಧಿಕಾರಿಗಳೊಂದಿಗೆ ಆಗಮಿಸಿದ್ದು ಜಿಲ್ಲೆಯ ಅಗ್ನಿ ಶಾಮಕ ದಳ ಅಧಿಕಾಗಳು  ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಹ ಆಗಮಿಸಿ ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ. ಸದ್ಯ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಿಯರ  ಸಹಾಯ ಪಡೆದು ಬೋಟ್ ಬಳಸಿಕೊಂಡು ವ್ಯಕ್ತಯ ಪತ್ತೆಗಾಗಿ ಶೋಧಕಾರ್ಯಕ್ಕೆ ಮುಂದಾಗಿದ್ದಾರೆ.

ಸದ್ಯ ಬಾದಾಮಿ ತಹಸಿಲ್ದಾರ ಸುಹಾಸ ಇಂಗಳೆ ಸ್ಥಳಿಯ ನಿಪುನ ಇಜುಗಾರರ 6 ತಂಡಗಳನ್ನ ರಚಿಸಿ ನದಿಯ ಕೆಳಭಾಗದ  ನಾಲ್ಕೈದು ಕಿಮೀ ದೂರದಲ್ಲಿಯೂ ಕೊಚ್ಚಿಹೋದ ವ್ಯಕ್ತಿ ಹುಡುಕಾಟ ನಡೆಸಿದ್ದಾರೆ.

Advertisement

ಕೊಚ್ಚಿಹೋದ ವ್ಯಕ್ತಿ ಸಾಮಾನ್ಯನಲ್ಲ ಈ ಹಿಂದೆ ಇದೆ ನದಿಯಲ್ಲಿ ಕೊಚ್ಚಿ ಹೋಗಿದ್ದ ಸುಮಾರು ಜನರನ್ನ ಸಾಕಷ್ಟುಬಾರಿ ರಕ್ಷಿಸಿದ್ದಾನೆ, ನೀರಲ್ಲಿ ಮುಳುಗಿ ಸತ್ತ ಹೆಣಗಳನ್ನ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಅದೃಷ್ಟ ವಶಾತ್ ಈ ನದಿಯ ದಡದಲ್ಲಿ ಜೀವ ರಕ್ಷಕನಾಗಿದ್ದ  ವೆಂಕನಗೌಡ ಸಾಲಿಗೌಡ್ರ ಇಂದು ಅದೆ ನದಿಯಲ್ಲಿ ಕೊಚ್ಚಿಹೋಗಿದ್ದು ಜನರಲ್ಲಿ ಆತಂಕ ಹುಟ್ಟಿಸಿದೆ.

ನೀರಿನ ಮಟ್ಟ: ಮಳೆ ಪ್ರಾರಂಭವಾದಾಗಿನಿಂದ ಪ್ರತಿದಿನ ೫೦೦೦ ಕ್ಯೊಸೆಕ್ ನೀರು ಸತತ ಹರಿಯುತ್ತಿರುವುದರಿಂದ ಹಳೆ ಸೇತುವೆ ಸೇರಿದಂತೆ ಜಮಿನುಗಳು ಸಹ ಜಲಾವೃತಗೊಂಡಿವೆ. ಹರಿಯುತ್ತಿರುವ ನೀರು ಹೆಚ್ಚು ಕಡಿಮೆ ಯಾಗುತ್ತಿರುವುದರಿಂದ ಸದ್ಯ ನದಿ ಪಕ್ಕದಲ್ಲಿರುವ ರೈತರಿಗೆ ಭಯದ ವಾತಾವರಣ ನಿರ್ಮಾನವಾಗಿದೆ.

ಗದಗ ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಮುದಕಣ್ಣ ಹೆರಕಲ್, ಪ್ರವೀಣ ಮೇಟಿ, ಆನಂದ ನರಗುಂದ, ಕಂದಾಯ  ನೀರಿಕ್ಷಕ ಎ.ಡಿ. ಸಾರವಾಡ, ಗ್ರಾಮಲೆಕ್ಕಾಧಿಕಾರಿ ಎಸ್ ಜೆ ದ್ಯಾಪೂರ, ಎಎಸ್‌ಐ ಎ ಎಲ್ ಗೊರವರ, ಸೇರಿದಂತೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next