Advertisement

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

03:15 PM Dec 22, 2021 | Suhan S |

ನಾಲತವಾಡ (ವಿಜಯಪುರ) : ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಾಲತವಾಡ ಪಟ್ಟಣದ ನಾರಾಯಣಪುರ ರಸ್ತೆಯಲ್ಲಿ ನಡೆದಿದೆ.

Advertisement

ನಾಲತವಾಡ ಪಟ್ಟಣದ ನಿವಾಸಿ ಅಮರಪ್ಪ ಬಸಲಿಂಗಪ್ಪ ಗಂಗನಗೌಡ್ರ ನೇಣಿಗೆ ಶರಣಾಗಿರುವ ರೈತ. ಅಮರಪ್ಪ ವಿವಿಧ ಬ್ಯಾಂಕ್ ಹಾಗೂ ಕೈಗಡದಲ್ಲಿ 2.75 ಸಾವಿರ ಸಾಲಮಾಡಿಕೊಂಡಿದ್ದರು. ಇದರಿಂದ ಮನನೊಂದ ರೈತ ಅಮರಪ್ಪ ನೇಣಿಗೆ ಶರಣಾಗಿದ್ದಾರೆ.

ಸ್ಥಳಕ್ಕೆ ನಾಲತವಾಡ ಪಟ್ಟಣದ ಹೊರ ಠಾಣೆಯ ಎಎಸ್ಐ ಬಿ‌ಎಸ್ ನ್ಯಾಮಣ್ಣವರ ಹಾಗೂ ಸಿಬ್ಬಂದಿಗಳು ಇದ್ದರು ಹಾಗೂ ನಾಲತವಾಡ ಪಟ್ಟಣದ ಉಪ ತಹಶಿಲ್ದಾರರ ಕಚೇರಿಯ  ತಲಾಟಿ ಗಂಗಾಧರ ಜೂಲಗುಡ್ಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next