Advertisement

ಮೆಕ್ಕೆಜೋಳ ಬಣವೆಗೆ ಬೆಂಕಿ ಹಚ್ಚಿ ರೈತ ಆತ್ಮಹತ್ಯೆ

06:55 AM Jan 14, 2018 | Team Udayavani |

ಹಿರೇಕೆರೂರ: ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಸಿಗದಿರುವುದರಿಂದ ಮಾನಸಿಕವಾಗಿ ನೊಂದ ವಿಕಲಚೇತನ ರೈತ ಮೆಕ್ಕೆಜೋಳದ ಬಣವೆಗೆ ಬೆಂಕಿ ಹಚ್ಚಿ ಅದರಲ್ಲೇ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಒಡೆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಕರಬಸಪ್ಪ ಗಂಗಮ್ಮನವರ (60) ಆತ್ಮಹತ್ಯೆ ಮಾಡಿಕೊಂಡ ರೈತ. ಮೂರು ಎಕರೆ ಜಮೀನಿನಲ್ಲಿ ಗೋವಿನಜೋಳ ಮತ್ತು ಹತ್ತಿ ಬೆಳೆದಿದ್ದರು. ಆದರೆ ಮೆಕ್ಕೆಜೋಳಕ್ಕೆ ಉತ್ತಮ ಬೆಲೆ ಇಲ್ಲದಿರುವುದರಿಂದ ಮಾನಸಿಕವಾಗಿ ನೊಂದಿದ್ದರು. ಜೊತೆಗೆ ಕೆವಿಜಿ ಬ್ಯಾಂಕ್‌ನಲ್ಲಿ ಹಾಗೂ ಕೈಗಡವಾಗಿ 4.50 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು.

ಇದರಿಂದ ಮನನೊಂದು ಶನಿವಾರ ಸಂಜೆ ಮೆಕ್ಕೆಜೋಳದ ಬಣವೆಗೆ ಬೆಂಕಿ ಹಚ್ಚಿ, ಅದೇ ಬೆಂಕಿಯಲ್ಲಿ ತಾವೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹಂಸಭಾವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next