Advertisement

ನೆಚ್ಚಿನ ಶಿಕ್ಷಕಿಗೆ ಮಕ್ಕಳಿಂದ ಡೊಳ್ಳು ಕುಣಿತ, ಮೆರವಣಿಗೆಯ ಬೀಳ್ಕೊಡುಗೆ !

06:10 PM Aug 02, 2023 | Pranav MS |

ಸಾಗರ: 29 ವರ್ಷಗಳಿಂದ ಸೇವೆ ಸಲ್ಲಿಸಿ ಮಕ್ಕಳಿಗೆ ನೆಚ್ಚಿನ ಶಿಕ್ಷಕಿಯಾಗಿದ್ದ ಕಮಲಾಬಾಯಿ ಅವರಿಗೆ ತಾಲೂಕಿನ ಗುಡ್ಡೇಮನೆ ಬೆಳೆಯೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ವಯೋನಿವೃತ್ತಿ ಆದ ಹಿನ್ನೆಲೆಯಲ್ಲಿ ಆ ಶಾಲೆಯ ಮಕ್ಕಳು ಹಾಗೂ ಹಿರಿಯ ವಿದ್ಯಾರ್ಥಿಗಳು ಪೂರ್ಣ ಕುಂಭ, ಡೊಳ್ಳುಕುಣಿತ, ಮೆರವಣಿಗೆ ಮೂಲಕ ಬೀಳ್ಕೊಡುಗೆ ಮಾಡಿದ್ದು ವಿಶೇಷವಾಗಿತ್ತು.

Advertisement

ಇದಕ್ಕೂ ಮುನ್ನ ಮುಖ್ಯ ಶಿಕ್ಷಕಿ ಮಾಲತಿ ಕೆ.ಎಸ್. ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಸಾಗರದ ವೈದ್ಯರಾದ ಡಾ. ರಾಮಚಂದ್ರ ಭಾಗವತ್, ಡಾ. ನಳಿನಾ ಭಾಗವತ್, ಡಾ. ಕಿಷನ್, ಡಾ. ಶ್ರೇಯಾ, ತಿಮ್ಮಪ್ಪ ಎನ್.ಎಚ್., ಶ್ರೀನಿವಾಸಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು. ನಿವೃತ್ತ ಸಹಶಿಕ್ಷಕಿ ಕಮಲಾಬಾಯಿ ಶಾಲೆಗೆ ನಲಿ ಕಲಿ ಸ್ಟಾಂಡ್‌ನ ಕೊಡುಗೆ ನೀಡಿದರು.

ಇದನ್ನೂ ಓದಿ: ಹೊನ್ನಿಕೇರಿ ಅರಣ್ಯದಲ್ಲಿ ಚಿರತೆ ಪತ್ತೆ; ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಚಿತ್ರಗಳು ಸೆರೆ

Advertisement

Udayavani is now on Telegram. Click here to join our channel and stay updated with the latest news.

Next