Advertisement

ಸಾಹಿತ್ಯ ಹಬ್ಬಕ್ಕೆ ಕಲ್ಪತರುನಾಡು ಸಜ್ಜು

03:55 PM Feb 01, 2018 | Team Udayavani |

ತುಮಕೂರು: ನಗರದಲ್ಲಿ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರಗು ಮೇಳೈಸಿದೆ ಫೆ1,2 ರಂದು ಶೈಕ್ಷಣಿಕ ನಗರದಲ್ಲಿ ಕನ್ನಡದ ನುಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಿದ್ಧತೆ ನಡೆಸಿದೆ.

Advertisement

ನಗರದ ಐತಿಹಾಸಿಕ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಸಮೀಪವಿರುವ ಅಮಾನಿ ಕೆರೆಯ ಗಾಜಿನ ಮನೆ ಮದುವಣಗಿತ್ತಿಯಂತೆ ಸಿಂಗಾರ ಗೊಂಡಿದ್ದು ಕನ್ನಡಾಭಿಮಾನಿ ಸಾಹಿತ್ಯಾ ಸಕ್ತರನ್ನು ಕೈಬೀಸಿ ಕರೆಯುವಂತಿದೆ.

ಪ್ರೊ. ಸಿದ್ದರಾಮಯ್ಯ ಅಧ್ಯಕ್ಷತೆ: ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರೊ. ಎಸ್‌.ಜಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯ ಲಿರುವ ಎರಡು ದಿನಗಳ ಈ ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ನಾಡು ನುಡಿ ಸಂಸ್ಕೃತಿ ಪರಂಪರೆಯ ಬಗ್ಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ನಿರ್ಣಯವಿಲ್ಲ: 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಲವಾರು ಸಾಕ್ಷಿಗಳಿಗೆ ವೇದಿಕೆಯಾಗಲಿದ್ದು ಯಾವುದೇ ನಿರ್ಣಯ ಕೈಗೊಳ್ಳದೆ ವಿಚಾರ ಸಂಕಿರಣಗಳು ನಡೆಯಲಿವೆ ಇದರ ಜೊತೆಗೆ ಈ ಬಾರಿ ಹಲವು ದಿನಗಳಿಂದ ನೆನಗುದಿಗೆ ಬಿದ್ದಿರುವ ಕನ್ನಡ ಭವನ ಈ ವೇಳೆ ದ್ಘಾಟನೆಯಾಗುತ್ತಿರುವುದು ವಿಶೇಷವಾಗಿದೆ.

ಡೀಸಿ ಧ್ವಜಾರೋಹಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಬಾ.ಹ. ರಮಾಕುಮಾರಿ, ಗೌರವ ಕಾರ್ಯದರ್ಶಿ ಕೆ. ರವಿಕುಮಾರ್‌ ಮುಂದಾಳತ್ವದಲ್ಲಿ ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ನಡೆಯುತ್ತಿರುವ ತುಮಕೂರು ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಗುರುವಾರ ಬೆಳಗ್ಗೆ 8 ಗಂಟೆಗೆ ರಾಷ್ಟ್ರಧ್ವಜವನ್ನು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್‌, ನಾಡಧ್ವಜವನ್ನು ಮೇಯರ್‌ ಎಚ್‌.ರವಿಕುಮಾರ್‌, ಪರಿಷತ್‌ ಧ್ವಜವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಬಾ.ಹ. ರಮಾಕುಮಾರಿ ಆರೋಹಣ ಮಾಡಲಿದ್ದಾರೆ.

Advertisement

ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಬೆಳಗ್ಗೆ 9 ಗಂಟೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ದಿವ್ಯಾ ವಿ.ಗೋಪಿನಾಥ್‌ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಪಂಅಧ್ಯಕ್ಷೆ ಲತಾ ವಹಿಸಲಿದ್ದಾರೆ. ಪಾಲಿಕೆ ಆಯುಕ್ತ ಎಲ್‌. ಮಂಜುನಾಥ, ಕನ್ನಡ ಪರ ಸಂಘಟನೆಯ ಮುಖಂಡರಾದ ಧನಿಯಾಕುಮಾರ್‌, ದೀಪಕ್‌, ಜಿ.ವಿ.ವೆಂಕಟೇಶ್‌, ವಿಷ್ಣುವರ್ಧನ, ಟಿ.ಎ.ರಘುರಾಂ, ತೀರ್ಥೇಶ್‌, ತನುಜ್‌ಕುಮಾರ್‌, ಆರಾಧ್ಯ ಮಂಚಲದೂರೆ, ಶಂಕರ್‌ ಇತರರು ಉಪಸ್ಥಿತರಲಿದ್ದಾರೆ. ಮೆರವಣಿಗೆಯು ಬಿ.ಜಿ.ಎಸ್‌. ವೃತ್ತದಿಂದ ಹೊರಪೇಟೆ ಮಾರ್ಗವಾಗಿ ಗಾಜಿನಮನೆಯವರೆಗೂ ಸಂಚರಿಸಲಿದೆ. ಮೆರವಣಿಗೆಯಲ್ಲಿ ಪೂರ್ಣಕುಂಭಗಳೊಂದಿಗೆ ಜಾನಪದ ಕಲಾ ತಂಡಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಅಧ್ಯಕ್ಷರಿಂದ ಉದ್ಘಾಟನೆ: ಲೇಖಕ ಪ್ರೊಜಿ.ಎಸ್‌. ಸಿದ್ದಲಿಂಗಯ್ಯ ಅವರು ಬೆಳಗ್ಗೆ 11.30ಕ್ಕೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕಾನೂನು ಸಂಸದೀಯ, ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಟಿ.ಬಿ. ಜಯಚಂದ್ರ, ವಿಧಾನಪರಿಷತ್‌ ಸದಸ್ಯ ಡಾ. ಜಿ. ಪರಮೇಶ್ವರ್‌, ಶಾಸಕ ಕೆ.ಎನ್‌.ರಾಜಣ್ಣ ಉಪಸ್ಥಿತರಿರುವರು. ಶಾಸಕ ರಫಿಕ್‌ ಅಹಮದ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕ ಕೆ.ಬಿ.ಸಿದ್ದಯ್ಯ ನಿಕಟ ಪೂರ್ವ ಅಧ್ಯಕ್ಷರ ನುಡಿಯಲಿದ್ದಾರೆ. ನಂತರ ಪ್ರೋ.ಎಸ್‌ .ಜಿ.ಸಿದ್ದರಾಮಯ್ಯ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.

ವಿವಿಧ ಗೋಷ್ಠಿಗಳು: 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ವಿಷಯಗಳ ಬಗ್ಗೆ ಪ್ರಮುಖ ಸಾಹಿತಿಯಗಳು ವಿಷಯ ಮಂಡಿಸಲಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಜಿಲ್ಲೆಯ ಕೊಡುಗೆ ಕುರಿತು ಸಂಜೆ 4 ಗಂಟೆಗೆ ಎಂ.ಜಿ.ಸಿದ್ದರಾಮಯ್ಯ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ತುಮಕೂರು ಜಿಲ್ಲೆಯ ಕೊಡುಗೆ ಕುರಿತು ಟಿ.ಆರ್‌.ಅನಂತರಾಮು ಉಪನ್ಯಾಸ ನೀಡಲಿದ್ದಾರೆ.

2ನೇ ವಿಚಾರಗೋಷ್ಠಿ ಸಂಜೆ-5 ಗಂಟೆಗೆ ನಡೆಯಲಿದ್ದು ಕೆ.ದೊರೈರಾಜು ಸ್ಥಳೀಯ ಸಮಸ್ಯೆಗಳು ಮತ್ತು ಹೋರಾಟಗಳು ಕುರಿತು ಉಪನ್ಯಾಸ ನೀಡುವರು. ಕೃಷಿ ಮತ್ತು ಕೃಷಿಕರ ಬಿಕ್ಕಟ್ಟುಗಳ ಕುರಿತು ಮಲ್ಲಿಕಾರ್ಜುನ ಹೊಸಪಾಳ್ಯ, ಜಲಸಂಬಂಧೀ ಸಮಸ್ಯೆಗಳ ಕುರಿತು ಸಿ.ಕೆ.ಮಹೇಂದ್ರ ಉಪನ್ಯಾಸ ನೀಡಲಿದ್ದಾರೆ.

ಸಂಸ್ಕೃತಿ ಸೌರಭಕಾರ್ಯಕ್ರಮ ಸಂಜೆ 7 ಗಂಟೆಗೆ ನಡೆಯಲಿದ್ದು, ಡಾ. ಕಂಟಲಗೆರೆ ಸಣ್ಣಹೊನ್ನಯ್ಯ ಆಶಯ ನುಡಿಗಳನ್ನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಲಕ್ಷ್ಮಣ್‌ದಾಸ್‌ ವಹಿಸಲಿದ್ದಾರೆ. ಉದ್ಘಾಟನೆಯನ್ನು ಬಸವರಾಜಪ್ಪ ಆಪಿನಕಟ್ಟೆ ನೇರವೇರಿಸಲಿದ್ದು, ಗುಬ್ಬಿ ಚೆನ್ನಬಸಯ್ಯ, ತು.ಮ. ಬಸವರಾಜು, ಮೆಳೇಹಳ್ಳಿ ದೇವರಾಜು ಉಪಸ್ಥಿತರಲಿದ್ದಾರೆ.

ಈ ವೇಳೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ ಕೃತಿಗಳ ಲೋಕಾರ್ಪಣೆ ಸಮ್ಮೇಳನದಲ್ಲಿ ವಿವಿಧ ಲೇಖಕರ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮನು ಬಳಿಗಾರ್‌ ಲೋಕಾರ್ಪಣೆ ಮಾಡಲಿದ್ದಾರೆ. ಸಮ್ಮೇಳನದ ಹೆಬ್ಟಾಗಿಲನ್ನು ಸಂಸದ ಬಿ.ಎನ್‌.ಚಂದ್ರಪ್ಪ, ಮಹಾ ಮಂಟಪವನ್ನು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ ರಾಜ್‌, ವೇದಿಕೆಯನ್ನು ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಉದ್ಘಾಟಿಸಲಿದ್ದಾರೆ. ಚಿತ್ರಕಲಾ ಪ್ರದರ್ಶನವನ್ನು ತುಮಕೂರು ವಿವಿ ಕುಲಪತಿ ಪೊ›.ಜಯಶೀಲ, ಪುಸ್ತಕ ಮಳಿಗೆ ಉದ್ಘಾಟನೆಯನ್ನು ಎಸ್‌.ನಾಗಣ್ಣ ನೇರವೇರಿಸಲಿದ್ದಾರೆ.

ತುಮಕೂರು ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದ ಗಾಜಿನ ಮನೆಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳು
ನಡೆದಿದೆ. ಈ ಸಮ್ಮೇಳನಕ್ಕೆ ಜಿಲ್ಲೆಯಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸುವರು. ಈ
ಸಂದರ್ಭದಲ್ಲೇ ಕನ್ನಡ ಭವನ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಬಾ.ಹಾ. ರಮಾಕುಮಾರಿ, ಕಸಾಪ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next