Advertisement

ಶಿವಣ್ಣ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕಾತರ

10:16 AM Jul 10, 2020 | Lakshmi GovindaRaj |

ಜುಲೈ 12- ಇದು ಶಿವರಾಜ್‌ ಕುಮಾರ್‌ ಅಭಿಮಾನಿಗಳ ಪಾಲಿಗೆ ವಿಶೇಷ ದಿನ. ಕಾರಣವೇನೆಂಬುದನ್ನು ಹೊಸದಾಗಿ ಹೇಳುವ ಆಗತ್ಯವಿಲ್ಲ. ಹೌದು, ಜುಲೈ 12 ಶಿವರಾಜ್‌ ಕುಮಾರ್‌ ಅವರ ಹುಟ್ಟುಹಬ್ಬ. ಶಿವಣ್ಣ ಹುಟ್ಟುಹಬ್ಬವನ್ನು  ಅಭಿಮಾನಿಗಳು ದ್ಧೂರಿಯಾಗಿ ಆಚರಿಸುತ್ತಾರೆ. ಮುಂಚಿನ ದಿನ ರಾತ್ರಿಯಿಂದಲೇ ಮನೆ ಮುಂದೆ ಸೇರಿ ಕೇಕ್‌ ಕತ್ತರಿಸಿ ಸಂಭ್ರಮಿಸುತ್ತಾರೆ. ಆದರೆ ಈ ವರ್ಷ ಅಭಿಮಾನಿಗಳ ಆ ಸಂಭ್ರಮಕ್ಕೆ ಬ್ರೇಕ್‌ ಬಿದ್ದಿದೆ. ಕೋವಿಡ್‌ 19 ಎಂಬ ಮಹಾಮಾರಿ  ಹುಟ್ಟುಹಬ್ಬದ ಸಂಭ್ರಮದಲ್ಲಿ ಜೊತೆಯಾಗಿ ಸೇರದಂತೆ ಮಾಡಿದೆ.

Advertisement

ಹಾಗಂತ ಅಭಿಮಾನಿಗಳು ಶಿವಣ್ಣ ಹುಟ್ಟುಹಬ್ಬವನ್ನು ಆಚರಿಸುವುದಿಲ್ಲ ಎಂದು ನೀವು ಭಾವಿಸುವಂತಿಲ್ಲ. ಏಕೆಂದರೆ ತಮ್ಮದೇ ಯಲ್ಲಿ ಅಭಿಮಾನಿಗಳು ಶಿವಣ್ಣ  ಹುಟ್ಟುಹಬ್ಬ ಆಚರಿಸಲಿದ್ದಾರೆ. ಹುಟ್ಟುಹಬ್ಬಕ್ಕೆ ಇನ್ನೇನು ಕೆಲ ದಿನ ಬಾಕಿ  ಇರುವಾಗಲೇ, ಶಿವಣ್ಣ ಅಭಿಮಾನಿಗಳು ಭರ್ಜರಿ ತಯಾರಿ ಶುರುಮಾಡಿದ್ದಾರೆ. ಒಂದೆಡೆ ಅಭಿಮಾನಿಗಳು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮತ್ತೊಂದೆಡೆ ನಟ  ಕಿಚ್ಚ ಸುದೀಪ್‌ ಬರ್ತ್‌ಡೇ ಗೂ ಮೊದಲೇ ವಿಶೇಷ ಗಿಫ್ಟ್ ನೀಡುವ ಮೂಲಕ ಶುಭ ಕೋರಿದ್ದಾರೆ.

ಹೌದು, ನಟ ಶಿವರಾಜ್‌ ಕುಮಾರ್‌ ಕೋವಿಡ್‌ 19 ಕಾರಣದಿಂದಾಗಿ ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು  ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಲ್ಲದೆ ಹುಟ್ಟುಹಬ್ಬದ ದಿನ ಮನೆಯಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಇದರಲ್ಲಿ ನನ್ನ ಆರೋಗ್ಯಕ್ಕಿಂತ ನಿಮ್ಮ ಆರೋಗ್ಯ ಮುಖ್ಯ. ಕೋವಿಡ್‌ 19 ಪರಿಸ್ಥಿತಿ ಎಲ್ಲ  ತಿಳಿಯಾದ ಮೇಲೆ ನಾವೆಲ್ಲರೂ ಭೇಟಿಯಾಗೋಣ ಇದು ನನ್ನ ಪ್ರಾಮಿಸ್‌ ಎಂದು ಶಿವಣ್ಣ ತಿಳಿಸಿದ್ದರು.

ಹೀಗಾಗಿ, ಅಭಿಮಾನಿಗಳು ಶಿವರಾಜಕುಮಾರ್‌ ಅವರ ಹುಟ್ಟುಹಬ್ಬವನ್ನು ಸಿಡಿಪಿ(ಕಾಮನ್‌ ಡಿಪಿ) ಮೂಲಕ ಸಾಮಾಜಿಕ  ಜಾಲತಾಣಗಳಲ್ಲೇ ಸಂಭ್ರಮದಿಂದ ಆಚರಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಈ ಸಿಡಿಪಿ ಸಿದ್ಧಪಡಿಸಲಾಗಿದ್ದು, ಇತ್ತೀಚೆಗೆ ಕಿಚ್ಚ ಸುದೀಪ್‌ ಇದನ್ನು ಬಿಡುಗಡೆ ಗೊಳಿಸಿದ್ದಾರೆ. ಸಿಡಿಪಿಯನ್ನು ಸ್ವತಃ ಕಿಚ್ಚ ಸುದೀಪ್‌ ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಸಿಡಿಪಿ ಫೋಟೋ ಹಾಕಿ ಸಾಲುಗಳನ್ನು ಬರೆದಿರುವ ಕಿಚ್ಚ, ಜುಲೈ 12ರಂದು ಶಿವಣ್ಣನ ಹುಟ್ಟುಹಬ್ಬದ ಹಿನ್ನೆಲೆ ಅವರ ಅಭಿಮಾನಿ ಗಳು ಸಿಡಿಪಿ ಡಿಸೈನ್‌ ಮಾಡಿದ್ದು,  ಇದನ್ನು ಬಿಡುಗಡೆಗೊ ಳಿಸಲು ಸಂತಸವಾಯಿತು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್‌ ಶಿವಣ್ಣನಿಗೆ ಹುಟ್ಟುಹಬ್ಬಕ್ಕೆ ಮುಂಚಿತವಾಗಿ ವಿಶೇಷವಾಗಿ ಶುಭಾಶಯ ಕೋರಿದ್ದಾರೆ. ಇನ್ನು, ಈ ಬಾರಿ ಶಿವ ರಾಜ್‌ ಕುಮಾರ್‌  ಅವರ ಭಜರಂಗಿ 2 ಚಿತ್ರ ಅಭಿ ಮಾನಿ ಗಳಿಗೆ ಸರ್ಪ್ರೈಸ್‌ ನೀಡಲು ಮುಂದಾಗಿದೆ. ಈ ಬಗ್ಗೆ ಸ್ವತಃ ಚಿತ್ರತಂಡ ಟ್ವೀಟ್‌ ಮಾಡಿದೆ. ಇಷ್ಟು ದಿನ ಕೋವಿಡ್‌ ಮಹಾಮಾರಿಯಿಂದ ಏನೂ ಅಪ್ಡೆಟ್‌ ಕೊಡಲಿಲ್ಲ.

Advertisement

ಭಜರಂಗಿ ಅಂದ್ರೇನೆ ದುಷ್ಟ ಶಕ್ತಿಗಳ ಹುಟ್ಟಡಗಿಸೋ ಹೆಸರು. ಕೆಟ್ಟದ್ದ ನ್ನೆಲ್ಲಾ ಸಂಹಾರ ಮಾಡಿ ಹೊಸ ಶಕ್ತಿಯೊಂದಿಗೆ ಬರುತ್ತಿದ್ದೇವೆ. ಫ‌ಸ್ಟ್‌ ಲುಕ್‌ ಎಲ್ಲಾ ಆಯ್ತು. ಇವಾಗ ಹೊಸ ಸರ್‌ಪ್ರೈಸ್‌… ಎಲ್ಲಾ ಶಿವಣ್ಣನ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದಂದು… ಎಂದು ಟ್ವೀಟ್‌  ಮಾಡುವ ಮೂಲಕ ಸಿನಿಮಾ ಬಗೆಗಿನ ಕುತೂಹಲ ಕಾಯ್ದಿರಿಸಿದೆ. ಕೋವಿಡ್‌ 19 ಮಾರಿ ಇದ್ದರೂ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸೋಶಿಯಲ್‌ ಮೀಡಿಯಾದಲ್ಲಿ ಅದ್ಧೂರಿಯಾಗಿ ಆಚರಿಸಲು ಮುಂದಾಗಿದೆ.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next