Advertisement

ಅಭಿಮಾನಿ ದೇವರುಗಳೇ, ಆತ್ಮಹತ್ಯೆ ಬೇಡ: ಕೈಮುಗಿದು ಬೇಡಿದ ರಾಘಣ್ಣ

01:54 PM Nov 04, 2021 | Team Udayavani |

ಬೆಂಗಳೂರು : ‘ಅಭಿಮಾನಿಗಳೇ ಆತ್ಮಹತ್ಯೆ ಮಾಡಿಕೊಂಡು ಪುನೀತ್ ಗೆ ಕೆಟ್ಟ ಹೆಸರು ತರಬೇಡಿ’ ಎಂದು ಗುರುವಾರ ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಕೈಮುಗಿದು ಬೇಡಿಕೊಂಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ರಾಘವೇಂದ್ರ ಅವರು, ‘ಅಭಿಮಾನಿಗಳೆ ದೇವರು ಅಂತ ಅಪ್ಪಾಜಿ ಹೇಳುತ್ತಿದ್ದರು. ದೇವರುಗಳಾದ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಮನವಿ ಮಾಡಿಕೊಳ್ಳುತ್ತೇನೆ’ ಎಂದರು.

‘ನಾವು ಪುನೀತ್ ಅಗಲಿಕೆಯಿಂದ ನೋವಿನಲ್ಲಿದ್ದೇವೆ, ಪುನೀತ್ ಪತ್ನಿ ಮತ್ತು ಮಕ್ಕಳು ನೋಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡು ನಿಮ್ಮ ತಂದೆ-ತಾಯಿಗೆ ನೋವು ಕೊಡಬೇಡಿ. ಒಬ್ಬರ ಹಿಂದೆ ಒಬ್ಬರು ಹೋದರೆ ಭೂಮಿ ಮೇಲೆ ಯಾರು ಇರುವುದಿಲ್ಲ. ಸಣ್ಣ ಮಕ್ಕಳಿಗೆ ಇದನ್ನೇ ಹೇಳಿಕೋಡುತ್ತೀರಾ’ ಎಂದು ಪ್ರಶ್ನಿಸಿದರು.

‘ನಿಮ್ಮ ಪಾದಕ್ಕೆ ನಮಸ್ಕರಿಸುತ್ತೇನೆ ದುಡುಕಿನ ನಿರ್ಧಾರ ಮಾಡಬೇಡಿ’ ಎಂದು ಬೇಡಿಕೊಂಡರು.

‘ಪುನೀತ್ 11ನೇ ಪುಣ್ಯಾರಾಧನೆ ಕಾರ್ಯಕ್ರಮದ ಯೋಚನೆ ಮಾಡುತ್ತಿದ್ದೇವೆ. ಆ ಬಗ್ಗೆ ಬಗ್ಗೆ ನಂತರದ ದಿನಗಳಲ್ಲಿ ತಿಳಿಸುತ್ತೇವೆ.ನಾನು ಪ್ರತಿ ನಿತ್ಯ ಅಪ್ಪು ಸಮಾಧಿ ಬಳಿಗೆ ದಿನ ಹೋಗುತ್ತಿದ್ದೇನೆ. ನೂರಾರು ಅಭಿಮಾನಿಗಳು ನಿತ್ಯವೂ ಬರುತ್ತಿದ್ದಾರೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next