Advertisement

ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದ ಸುಕ್ಷೇತ್ರ ಯಡೂರ ಶ್ರೀ ವೀರಭದ್ರೇಶ್ವರ ದೇವಸ್ಥಾನ ಜಲಾವೃತ

10:18 AM Jul 28, 2024 | Team Udayavani |

ಚಿಕ್ಕೋಡಿ: ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ಶ್ರೀ ವೀರಭದ್ರೇಶ್ವರ ದೇವಾಸ್ಥಾನ ಕೃಷ್ಣಾ ನದಿ ನೀರಿನ ಪ್ರವಾಹದಲ್ಲಿ ಜು.28ರ ಭಾನುವಾರ ಮುಂಜಾನೆ ಜಲಾವೃತವಾಗಿದೆ.

Advertisement

ಕೋಯ್ನಾ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿರುವ ಪರಿಣಾಮ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಉಂಟಾಗಿದೆ. ಭಾನುವಾರ ಯಡೂರ ದೇವಸ್ಥಾನಕ್ಕೆ ನೀರು ನುಗ್ಗಿದೆ. ಸುಮಾರು ಮೂರು ಅಡಿಗೂ ಅಧಿಕ ನೀರು ದೇವಸ್ಥಾನದಲ್ಲಿ ತುಂಬಿಕೊಂಡಿದೆ.

ಮಹಾರಾಷ್ಟ್ರ ಕೊಂಕಣ ಭಾಗದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಿಂದ ರಾಜ್ಯದ ಗಡಿ ಭಾಗದಲ್ಲಿ ಪ್ರವಾಹ ಎದುರಾಗಿದೆ. ನದಿ ನೀರು ಹೊಲ ಗದ್ದೆಗಳಿಗೆ ನುಗ್ಗಿ ಈಗ ತನ್ನ ಬಾಹು ವಿಸ್ತರಿಸಿಕೊಂಡು ದೇವಸ್ಥಾನ, ಗ್ರಾಮಗಳಿಗೆ ನುಗ್ಗುತ್ತಿದೆ.

ಜು.27ರ ಶನಿವಾರ ಕೃಷ್ಣಾ ನದಿಗೆ 2.50 ಲಕ್ಷ ಕ್ಯೂಸೆಕ್ ನೀರು ಬಂದಿದ್ದು, ಭಾನುವಾರ 2.80 ಲಕ್ಷ ಕ್ಯೂಸೆಕ್‌ ಕ್ಕೂ ಅಧಿಕವಾಗಿದೆ. ಕೃಷ್ಣಾ ನದಿಗೆ ಹೆಚ್ಚುವರಿಯಾಗಿ ಇನ್ನೂ 50 ಸಾವಿರ ಕ್ಯೂಸೆಕ್ ನೀರು ಬಂದರೆ ನದಿ ತೀರದ ಎಲ್ಲ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next