Advertisement

Tragedy: ಹಾವು ಓಡಿಸಲು ಹಾಕಿದ ಹೊಗೆ, ಇಡೀ ಮನೆಯನ್ನೇ ಭಸ್ಮ ಮಾಡಿತು…

11:12 AM Oct 30, 2023 | sudhir |

ಲಕ್ನೋ: ಮನೆಯೊಳಗೇ ಬಂದ ಹಾವೊಂದನ್ನು ಹೊರ ಓಡಿಸಲು ಮನೆಮಂದಿ ಮಾಡಿದ ಆ ಒಂದು ಕೆಲಸದಿಂದ ಇಡೀ ಮನೆ ಸುಟ್ಟು ಕರಕಲಾದ ಘಟನೆ ಉತ್ತರ ಪ್ರದೇಶದ ಬಂದಾ ನಗರದಲ್ಲಿ ನಡೆದಿದೆ.

Advertisement

ಉತ್ತರ ಪ್ರದೇಶದ ಬಂದಾ ನಗರದಲ್ಲಿ ವಾಸಿಸುತ್ತಿದ್ದ ರಾಜಕುಮಾರ್ ದಂಪತಿಗಳ ಮನೆಗೆ ಭಾನುವಾರದಂದು ಹಾವೊಂದು ನುಸುಳಿ ಕೂತಿದೆ ಇದನ್ನು ಕಂಡ ಮನೆಮಂದಿ ಮನೆಯೊಳಗಿದ್ದ ಹಾವನ್ನು ಎಷ್ಟೇ ಪ್ರಯತ್ನ ಪಟ್ಟರೂ ಮನೆಯೊಳಗಿಂದ ಹೊರ ಹಾಕಲು ಮಾತ್ರ ಸಾಧ್ಯವಾಗಲಿಲ್ಲ, ಇದರಿಂದ ಬೇಸತ್ತ ಮನೆಮಂದಿ ಹಾವನ್ನು ಮನೆಯೊಳಗಿಂದ ಹೊರ ಹಾಕಲು ಮನೆಯೊಳಗೆ ಹೊಗೆ ಹಾಕಲು ಮುಂದಾಗಿದ್ದಾರೆ, ಮನೆಯೊಳಗೆ ಸಗಣಿಯಿಂದ ತಯಾರಿಸಿದ ಬೆರಣಿಯನ್ನು ಹಾಕಿ ಬಳಿಕ ಬೆಂಕಿ ಹಚ್ಚಿ ಅದರಿಂದ ಬರುವ ಹೊಗೆಯಿಂದ ಹಾವು ಮನೆಯಿಂದ ಹೊರ ಬರಬಹುದು ಎಂದು ನಂಬಿ ಮನೆಯೊಳಗೆ ಬೆರಣಿ ರಾಶಿ ಹಾಕಿ ಹೊಗೆ ಹಾಕಿದ್ದಾರೆ, ಹೊಗೆ ಹಾಕಿದ ಕೆಲವೇ ಹೊತ್ತಿನಲ್ಲಿ ಬೆರಣಿಗೆ ಬೆಂಕಿ ಆವರಿಸಿ ಇಡೀ ಮನೆಯೇ ಸುಟ್ಟು ಭಸ್ಮವಾಗಿದೆ.

ಅಷ್ಟು ಮಾತ್ರವಲ್ಲದೆ ಇಷ್ಟು ವರ್ಷದಿಂದ ಕಷ್ಟ ಪಟ್ಟು ಸಂಪಾದಿಸಿದ ಬೇಳೆ ಕಾಳುಗಳು, ಚಿನ್ನಾಭರಣ ಸೇರಿ ಹಣಗಳು ಸುಟ್ಟು ಬೂದಿಯಾಗಿದೆ.

ಮನೆಗೆ ಬೆಂಕಿ ಬಿದ್ದ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ, ಹಾಗೂ ಪೊಲೀಸರು ಬೆಂಕಿ ನಂದಿಸಲು ಹರಸಾಹಸಪಟ್ಟು ಕೊನೆಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರೆ ಆದರೂ ಅಷ್ಟೋತ್ತಿಗಾಗಲೇ ಮನೆಯಲ್ಲಿದ್ದ ವಸ್ತುಗಳೆಲ್ಲವೂ ಸುಟ್ಟು ಬೂದಿಯಾಗಿತ್ತು.

ಘಟನೆ ಬಗ್ಗೆ ಮನೆಯವರನ್ನು ಪೊಲೀಸರು ವಿಚಾರಿಸಿದ ವೇಳೆ ಮನೆಮಂದಿ ಹಾವನ್ನು ಓಡಿಸಲು ಮನೆಯೊಳಗೆ ಹೊಗೆ ಹಾಕಲಾಗಿತ್ತು ಇದರಿಂದ ಬೆಂಕಿ ಆವರಿಸಿ ಅವಘಡ ಸಂಭವಿಸಿದೆ ಎಂದು ಹೇಳಿಕೊಂಡಿದ್ದಾರೆ, ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.

Advertisement

ಮನೆ, ದವಸ ಧಾನ್ಯ, ಚಿನ್ನಾಭರಣ, ಸೇರಿದಂತೆ ಹಾನಿಗೊಳಗಾದ ಘಟನೆ ಕುರಿತು ಕಂದಾಯ ಇಲಾಖೆಗೂ ಮಾಹಿತಿ ನೀಡಲಾಗಿದ್ದು ಅಧಿಕಾರಿಗಳು ಹಾನಿಯ ಪ್ರಮಾಣದ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ರಾಜ್ ಕುಮಾರ್ ದೆಹಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಪತ್ನಿ ಹಾಗು ಐದು ಮಂದಿ ಮಕ್ಕಳೊಂದಿಗೆ ಉತ್ತರ ಪ್ರದೇಶದ ಬಂದಾ ನಗರದಲ್ಲಿ ಜೀವನ ನಡೆಸುತಿದ್ದರು, ಭಾನುವಾರ ಮನೆಯೊಳಗೆ ಬಂದ ಹಾವನ್ನು ಓಡಿಸಲು ಮನೆಯೊಳಗೆ ಹೊಗೆ ಹಾಕಲು ಹೋಗಿ ಮನೆ ಸಹಿತ ಮನೆಯೊಳಗಿದ್ದ ವಸ್ತುಗಳೆಲ್ಲವನ್ನೂ ಕಳೆದುಕೊಂಡಿದ್ದಾರೆ.

ಇಷ್ಟೆಲ್ಲಾ ನಡೆದ ಬಳಿಕ ಮನೆಯೊಳಗಿದ್ದ ಹಾವು ಎಲ್ಲಿ ಹೋಗಿದೆ ಎಂಬುದು ಮನೆ ಮಂದಿಯ ಗಮನಕ್ಕೆ ಮಾತ್ರ ಬರಲಿಲ್ಲ,

ಇನ್ನು ಮುಂದೆ ಎಲ್ಲಿಯಾದರೂ ಮನೆಯೊಳಗೆ ಹಾವು ಬಂತೆಂದು ಮನೆಯೊಳಗೆ ಹೊಗೆ ಹಾಕುವ ಪ್ರಯತ್ನ ಮಾಡಲು ಹೋಗದಿರಿ, ಹಾಗೇನಾದರೂ ಮನೆಯೊಳಗೆ ಹಾವು ಬಂದಿದ್ದಲ್ಲಿ ಸ್ಥಳೀಯ ಉರಗ ತಜ್ಞರನ್ನು ಕರೆಸಿ ಹಾವುಗಳನ್ನು ರಕ್ಶಣೆ ಮಾಡಿ, ಈ ರೀತಿ ಹಾವುಗಳನ್ನು ಓಡಿಸುವ ಪ್ರಯತ್ನ ಎಂದೂ ಮಾಡದಿರಿ.

ಇದನ್ನೂ ಓದಿ: Kerala Incident: ಕೇರಳ ಸರಣಿ ಸ್ಫೋಟ… ಮೃತರ ಸಂಖ್ಯೆ 3ಕ್ಕೆ ಏರಿಕೆ, ಇಂದು ಸರ್ವಪಕ್ಷ ಸಭೆ

Advertisement

Udayavani is now on Telegram. Click here to join our channel and stay updated with the latest news.

Next