Advertisement

Family Issues: ಕೌಟುಂಬಿಕ ಕಲಹ ಪತ್ನಿ, ಪತ್ನಿಯ ತಾಯಿ ಹತ್ಯೆ: ಪೊಲೀಸ್ ಠಾಣೆಗೆ ಶರಣಾದ ಆರೋಪಿ

08:04 AM Sep 18, 2023 | Kavyashree |

ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಲಗಿದ್ದ ಪತ್ನಿ ಹಾಗೂ ಪತ್ನಿಯ ತಾಯಿಯನ್ನು ಹತ್ಯೆಗೈದ ಆರೋಪಿ ಪೊಲೀಸ್ ಠಾಣೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

Advertisement

ಹತ್ಯೆಯಾದ ದುರ್ದೈವಿಗಳನ್ನು ರೂಪಾ ಮೇತ್ರಿ (32) ಹಾಗೂ ಆಕೆಯ ತಾಯಿ ಕಲ್ಲವ್ವ (55) ಎಂದು ಗುರುತಿಸಲಾಗಿದೆ. ಜೋಡಿ ಹತ್ಯೆಗೈದು ಪೊಲೀಸರಿಗೆ ಶರಣಾದ ಆರೋಪಿಯನ್ನು ಮಲ್ಲಿಕಾರ್ಜುನ ಮೇತ್ರಿ ಎಂದು ಗುರುತಿಸಲಾಗಿದೆ.

ಮಲ್ಲಿಕಾರ್ಜುನ ಕುಟುಂಬ ಕಳೆದ ಆರು ತಿಂಗಳ ಹಿಂದೆ ನಗರದ ನವಬಾಗ ಪ್ರದೇಶ ಬಾಗವಾನ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಮಹಿಳಾ ಸ್ವಸಹಾಯ ಗುಂಪಿನ ಸದಸ್ಯೆಯಾಗಿದ್ದ ರೂಪಾ, ಹಲವು ಸಂಘಟನೆಗಳ ಸದಸ್ಯೆಯೂ ಆಗಿದ್ದಳಂತೆ. ಇದೇ ಕಾರಣಕ್ಕೆ ಪದೇ ಪದೇ ಸಭೆ, ಸಮಾರಂಭ, ಸಂಘಟನೆ ಅಂತೆಲ್ಲ ಕುಟುಂಬದ ನಿರ್ವಹಣೆ ಮಾಡದೇ, ಮಕ್ಕಳನ್ನೂ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ ಎಂದು ಪತಿ-ಪತ್ನಿ ಮಧ್ಯೆ ಜಗಳವೂ ಆಗುತ್ತಿತ್ತು.

ಕೌಟುಂಬಿಕ ವ್ಯವಸ್ಥೆಯನ್ನೇ‌ ಮರೆತು ಓಡಾಡುತ್ತಿದ್ದ ಪತ್ನಿಯ ವರ್ತನೆಯಿಂದ ರೋಷಿ ಹೋಹೋಗಿದ್ದ ಮಲ್ಲಿಕಾರ್ಜುನ, ಭಾನುವಾರ ರಾತ್ರಿ ಮಲಗಿದ್ದ ಪತ್ನಿ ಹಾಗೂ ಆಕೆಯ ತಾಯಿಯ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

Advertisement

ಬಳಿಕ ತಾನೇ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ‌. ಸ್ಥಳಕ್ಕೆ ತೆರಳಿ ಪರಿಶೀಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ‌.

Advertisement

Udayavani is now on Telegram. Click here to join our channel and stay updated with the latest news.

Next