Advertisement

Crime: ಅಣ್ಣ, ತಂಗಿಗೆ ಆಸ್ತಿ ಪಾಲು ಕೊಡದ ಸೋದರನ ಕೊಲೆ!

11:09 AM Aug 05, 2024 | Team Udayavani |

ಬೆಂಗಳೂರು: ರಾಮಮೂರ್ತಿನಗರದ ವಿಜಿನಾ ಪುರದಲ್ಲಿ ಆಸ್ತಿ ವಿಚಾರವಾಗಿ ನಡೆದ ಜಗಳದಲ್ಲಿ ಸೋದರ ಸಂಬಂಧಿಯನ್ನೇ ಹತ್ಯೆ ಮಾಡಿದ ಇಬ್ಬರನ್ನು ರಾಮಮೂರ್ತಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

Advertisement

ರಾಮ ಮೂರ್ತಿ ನಗರದ ಬಾಬುರೆಡ್ಡಿ (54) ಕೊಲೆಯಾದವರು. ಬಾಬುರೆಡ್ಡಿ ಸಹೋ ದರಿಯ ಪತಿ ಗೋಪಾಲ್‌ ರೆಡ್ಡಿ ಹಾಗೂ ಸಹೋದರನ ಮಗ ಭರತ್‌ ಬಂಧಿತ ಆರೋಪಿಗಳು. ಬಾಬು ರೆಡ್ಡಿ ಪಿತ್ರಾರ್ಜಿತ ಆಸ್ತಿಯಲ್ಲಿ ತನ್ನ ಅಣ್ಣ ಹಾಗೂ ತಂಗಿಗೆ ಪಾಲು ನೀಡಿರಲಿಲ್ಲ. ಇದರಿಂದ ಇವರ ನಡುವೆ ಆಸ್ತಿಗಾಗಿ ಆಗಾಗ ಜಗಳ ನಡೆದು ಆಸ್ತಿ ವ್ಯಾಜ್ಯ ನ್ಯಾಯಾಲಯದ ಮೆಟ್ಟಿಲೇರಿತ್ತು. ಆಸ್ತಿ ಹಂಚಿಕೆ ಬಗ್ಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಬಾಬುರೆಡ್ಡಿ, ಆರೋಪಿಗಳು ಹಾಗೂ ಇತರ ಕುಟುಂಬ ಸದಸ್ಯರು ಶನಿವಾರ ಸಂಜೆ ರಾಮಮೂರ್ತಿನಗರದ ವಿಜಿನಾಪುರದಲ್ಲಿ ಸೇರಿ ದ್ದರು. ಈ ವೇಳೆ ಮಾತುಕತೆ ನಡೆಸುತ್ತಿದ್ದಾಗ ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಆರೋಪಿಗಳಾದ ಗೋಪಾಲ್‌ ರೆಡ್ಡಿ ಹಾಗೂ ಭರತ್‌ ಏಕಾಏಕಿ ಚಾಕು ವಿನಿಂದ ಬಾಬುರೆಡ್ಡಿಗೆ ಇರಿದಿದ್ದಾರೆ. ಪರಿಣಾಮ ಇರಿತದಿಂದ ತೀವ್ರವಾಗಿ ರಕ್ತಸ್ರಾವಕ್ಕೊಳಗಾಗಿದ್ದ ಬಾಬುರೆಡ್ಡಿ ಅವರನ್ನು ಅಲ್ಲಿದ್ದವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವನ್ನಪ್ಪಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ರಾಮಮೂರ್ತಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಂತರ ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಗೋಪಾಲ್‌ ರೆಡ್ಡಿ, ಭರತ್‌ ನನ್ನು ಬಂಧಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next