Advertisement

Rahul Gandhi: ‘ನೆಹರೂ ಕೃತಿಗೆ ಖ್ಯಾತಿ, ಬರೀ ಹೆಸರಿಗಲ್ಲ’: ರಾಹುಲ್‌ ಗಾಂಧಿ

08:26 PM Aug 17, 2023 | Team Udayavani |

ನವದೆಹಲಿ: ನೆಹರೂ ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ (ಎನ್‌ಎಂಎಂಎಲ್‌)ದ ಹೆಸರು ಬದಲಾವಣೆ ಕುರಿತು ಚರ್ಚೆ ಏರ್ಪಟ್ಟಿರುವ ನಡುವೆಯೇ, ಮಾಜಿ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರು, ಅವರ ಕೆಲಸಗಳಿಂದ ಪ್ರಸಿದ್ಧರಾಗಿದ್ದವರೇ ವಿನಾ ಬರೀ ಹೆಸರಿನಿಂದಲ್ಲ ಎಂದು ಕಾಂಗ್ರೆಸ್‌ ನಾಯಕ, ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ.

Advertisement

77ನೇ ಸ್ವಾತಂತ್ರ್ಯ ದಿನಾಚರಣೆಯಂದು ಎನ್‌ಎಂಎಂಎಲ್‌ ಅನ್ನು ಅಧಿಕೃತವಾಗಿ ಪ್ರಧಾನಮಂತ್ರಿ ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯ ಎಂದು ಮರು ನಾಮಕರಣ ಮಾಡಲಾಗಿದೆ. ಈ ಸಂಬಂಧ ಕಾಂಗ್ರೆಸ್‌ ನಾಯಕರು ಬೇಸರ ವ್ಯಕ್ತಪಡಿಸಿ, ಪ್ರಧಾನಿ ಮೋದಿ ಸರ್ಕಾರವು ನೆಹರೂ ಪರಂಪರೆಯನ್ನೇ ಅಳಿಸಲು ನೋಡುತ್ತಿದೆ ಎಂದು ಟೀಕಿಸಿದ್ದರು. ಈ ಬೆನ್ನಲ್ಲೇ ರಾಹುಲ್‌, ಹೆಸರಿನ ಬದಲಾವಣೆ ಇತಿಹಾಸ ಅಳಿಸಲಾಗದು ಎಂಬರ್ಥದಲ್ಲಿ ಮೇಲ್ಕಂಡ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next