Advertisement

ತಪ್ಪು ಪತ್ತೆಗೆ ಸಮಿತಿ ರಚನೆ!

06:02 PM Nov 21, 2017 | Team Udayavani |

ದಾವಣಗೆರೆ: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 10 ಜನ ಪೌರ ಕಾರ್ಮಿಕರಿಗೆ ಅನ್ಯಾಯ ಆಗಿದ್ದನ್ನು ಪತ್ತೆ ಹಚ್ಚಲು
ಮೇಯರ್‌ ಅಧ್ಯಕ್ಷತೆಯಲ್ಲಿ ಐವರು ಅಧಿಕಾರಿ, ಐವರು ಪಾಲಿಕೆ ಸದಸ್ಯರನ್ನೊಳಗೊಂಡ ಸಮಿತಿ ರಚಿಸಲು ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ತುರ್ತು ಸಾಮಾನ್ಯ ಸಭೆ ನಿರ್ಧರಿಸಿದೆ.

Advertisement

ಸಭೆ ಆರಂಭದಲ್ಲಿಯೇ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಸದಸ್ಯ ಎಂ. ಹಾಲೇಶ್‌, ಪೌರ ಕಾರ್ಮಿಕರಿಗೆ ಆದ ಅನ್ಯಾಯದ ಕುರಿತು ಪ್ರಸ್ತಾಪಿಸಿದರು. ಪಾಲಿಕೆ ಆಯುಕ್ತರನ್ನು ಪ್ರಶ್ನಿಸಿದ ಅವರು, ಇವರಿಗೆ ಅನ್ಯಾಯ ಆಗಿದ್ದು ಯಾರಿಂದ ಎಂಬುದನ್ನು ಪತ್ತೆಮಾಡಿ. ಅವರಿಗೆ ಶಿಕ್ಷೆ ಆಗಬೇಕು. ಇವರಿಗೆ ನ್ಯಾಯ ಸಿಗಬೇಕು ಎಂದರು. ಆಯುಕ್ತ ಬಿ.ಎಚ್‌.  ನಾರಾಯಣಪ್ಪ,  2016ರಲ್ಲಿ ಸರ್ಕಾರ ಆದೇಶಿದಂತೆ ಗುತ್ತಿಗೆ ಪೌರ ಕಾರ್ಮಿಕರ ಖಾಯಮಾತಿಗೆ ಕ್ರಮ ವಹಿಸಲಾಗಿದೆ. ಅದರಂತೆ 270 ಜನರ ಪಟ್ಟಿ ಕಳುಹಿಸಲಾಗಿದೆ. ಇವರು ಆ ಪಟ್ಟಿಯಲ್ಲಿ ಇಲ್ಲದೇ ಇರುವುದು ತಿಳಿದಿಲ್ಲ ಎಂದರು. ಆಗ ಗರಂ ಆದ ಹಾಲೇಶ್‌, ಸಿಪಿಐ ಸದಸ್ಯ ಎಚ್‌.ಜಿ. ಉಮೇಶ್‌, ಇಎಸ್‌ಐ, ಪಿಎಫ್‌ ಕಟ್ಟಿದ ದಾಖಲೆ ಇವೆ. ಅದರ  ಆಧಾರ ನೋಡಿ ಎಂದರು.

ಎಚ್‌.ಜಿ. ಉಮೇಶ್‌, ಈ ಸಭೆಯಲ್ಲಿ ಹೆಚ್ಚು ಚರ್ಚೆ ಮಾಡಿ ಅರ್ಥ ಇಲ್ಲ. ಅದ ಅನ್ಯಾಯ ಕುರಿತು ತನಿಖೆ ನಡೆಸಲು ಸದಸ್ಯರು, ಅಧಿಕಾರಿ ಇರುವ ಸಮಿತಿ ರಚಿಸಿ ಎಂದು ಸಲಹೆ ನೀಡಿದರು. ಅನ್ಯಾಯಕ್ಕೆ ಒಳಗಾದ ಪೌರ ಕಾರ್ಮಿಕರ ಕುರಿತು ಮಾತನಾಡಿದ ಮೇಯರ್‌ ಅನಿತಾಬಾಯಿ, ಸದಸ್ಯರ ಸಲಹೆಯಂತೆ 5 ಜನ ಅಧಿಕಾರಿ, ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಹೇಳಿದಾಗ ಇದಕ್ಕೆ ಪೌರ ಕಾರ್ಮಿಕರು ಸಮ್ಮತಿಸಿದರು.  ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಸಪ್ಪ, ದಿಲ್‌ ಶಾದ್‌, ಶ್ರೀನಿವಾಸ್‌, ಜಿ.ಬಿ. ಲಿಂಗರಾಜ್‌, ಪಾಲಿಕೆ ಸದಸ್ಯರು, ಪೌರ ಕಾರ್ಮಿಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಣ್ಣೀರಿಡುತ್ತಿದ್ದ ಕಾರ್ಮಿಕರು ಇತ್ತ ಸಭೆ ಆರಂಭ ಆದಾಗಿನಿಂದ ಮುಗಿಯುವರೆಗೆ ಮಹಿಳಾ ಪೌರ ಕಾರ್ಮಿಕರು ಆಗಿಂದಾಗ್ಗೆ
ಕಣೀ¡ರಿಡುತ್ತಲೇ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ತಮ್ಮ ಚಿಕ್ಕ ಮಕ್ಕಳೊಂದಿಗೆ ಎದುರು ನೋಡುತ್ತಿದ್ದರು. ಕೊನೆಗೆ ಮೇಯರ್‌ ನೋಡ್ರಮ್ಮ ಎಂದಾಗ ಎಲ್ಲರೂ ಒಮ್ಮೆಲೇ ದಿಢೀರ್‌ ಕುರ್ಚಿಯಿಂದ ಎದ್ದು, ಕಾತುರದಿಂದ ಅವರ ಮಾತು ಕೇಳಿದ್ದು ಅವರ ಅಮಾಯಕತೆಗೆ ಕನ್ನಡಿ ಹಿಡಿದಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next