Advertisement

ಪ್ರತಿಭಟನಾ ನಿರತೆಯರ ಇಂಟರ್‌ವ್ಯೂ: ನಕಲಿ ಪತ್ರಕರ್ತನ ಬಂಧನ

11:54 AM Mar 22, 2017 | |

 ಬೆಂಗಳೂರು : ಕನಿಷ್ಠ ವೇತನಕ್ಕೆ ಆಗ್ರಹಿಸಿ ರಾಜಧಾನಿಯ ಸ್ವಾತಂತ್ರ್ಯ ಉದ್ಯಾನವನ ಹಾಗೂ ಸುತ್ತಮುತ್ತಲ ರಸ್ತೆ ಮಧ್ಯೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಅಹೋರಾತ್ರಿ ಧರಣಿ ಮತ್ತು ಪ್ರತಿಭಟನೆ  ಮೂರನೇ ದಿನವಾದ ಬುಧವಾರವೂ ಮುಂದುವರಿದಿದ್ದು, ಈ ವೇಳೆ ಪತ್ರಕರ್ತನ ಸೋಗಿನಲ್ಲಿ ಕಾರ್ಯಕರ್ತೆಯರನ್ನು ಒಂಟಿಯಾಗಿ ಕರೆದು ವಿವರಗಳನ್ನು ಪಡೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Advertisement

ಕಾರ್ಯಕರ್ತೆಯರನ್ನು ಒಬ್ಬೊಬ್ಬರನ್ನಾಗಿ ಕರೆದು ವಿಳಾಸ ಕೇಳಿ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ಅನುಮಾನ ಬಂದು ಸ್ಥಳದಲ್ಲಿದ್ದ ಪೊಲೀಸರಿಗೆ ತಿಳಿಸಿದಾಗ ಆತನ ನಿಜ ಬಣ್ಣ ಬಯಲಾಗಿದೆ.

ಪೊಲೀಸರು ವಶಕ್ಕೆ ಪಡೆದಾಗ ತಾನು ಮುರಳಿ (40) ಎಂದಿದ್ದು, ಖಾಸಗಿ ಪತ್ರಿಕೆಯೊಂದರ ಸಂಪಾದಕ ಎಂದಿದ್ದಾನೆ. ಹಲವು ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಇದೀಗ ಆತನನ್ನು ಉಪ್ಪಾರಪೇಟೆ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next