Advertisement

Puttur ಜಾತ್ರೆಯ ವೇಳೆ ಹಲ್ಲೆ ಪ್ರಕರಣ: ಮೂವರು ಆರೋಪಿಗಳು ದೋಷಮುಕ್ತ

12:54 AM Aug 26, 2023 | Team Udayavani |

ಪುತ್ತೂರು: 2021ರಲ್ಲಿ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೆಯ ವೇಳೆ ಅಧ್ಯಕ್ಷರ ನೇಮಕಾತಿಯ ವಿಚಾರದಲ್ಲಿ ನಡೆದ ಹಲ್ಲೆ ಮತ್ತು ಬೆದರಿಕೆ ವಿಚಾರದಲ್ಲಿ ದಾಖಲಾದ ಪ್ರಕರಣವನ್ನು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶಿಸಿದೆ. ಅರುಣ್‌ ಕುಮಾರ್‌ ಪುತ್ತಿಲ, ಅಶೋಕ್‌ ಕುಮಾರ್‌ ಪುತ್ತಿಲ, ಶ್ರೀಕಾಂತ್‌ ಆಚಾರ್‌ ಹಿಂದಾರ್‌ ದೋಷಮುಕ್ತರೆಂದು ನ್ಯಾಯಾಲಯ ಆದೇಶ ನೀಡಿದೆ. ಹಲ್ಲೆ ನಡೆಸಿದ್ದಾರೆಂದು ಸುರೇಶ್‌ ಕಣ್ಣರಾಯ ದೂರು ನೀಡಿದ್ದರು.

Advertisement

ಬಾಲಕಿ ನಾಪತ್ತೆ
ಉಪ್ಪಿನಂಗಡಿ: ಇಲ್ಲಿನ ಮುಸ್ತಾಫ‌ ಎಂಬವರ ಮಗಳು ಫಾತಿಮಾತ್‌ ಶೌಹಾನಾ (17) ಅಗಸ್ಟ್‌ 22ರಿಂದ ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ರಾತ್ರಿ ಊಟ ಮುಗಿಸಿ ತಾಯಿಯೊಂದಿಗೆ ಮಲಗಿದ್ದವಳು ಮುಂಜಾನೆ ಎದ್ದು ನೋಡುವಾಗ ನಾಪತ್ತೆಯಾಗಿದ್ದು, ಆಕೆ ಉಪಯೋಗಿಸುವ ಮೊಬೈಲ್‌ ಕೂಡಾ ನಾಪತ್ತೆಯಾಗಿರುತ್ತದೆ. ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ ಆಫ್ ಆಗಿದ್ದು, ಹುಡುಕಾಟ ನಡೆಸಿದರೂ ಪತ್ತೆಯಾಗಿರುವುದಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲಿಸರು ಪ್ರಕರಣವನ್ನು ದಾಖಲಿಸಿ ಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next