Advertisement

ಕೈಕೊಡುತ್ತಿರುವ ಅದೃಷ್ಟ: ರಾಂಚಿ ಪಂದ್ಯದಲ್ಲಿ ಟಾಸ್ ಗೆ ಆಗಮಿಸಿಲು ಡುಪ್ಲೆಸಿಸ್ ಹಿಂದೇಟು

10:03 AM Oct 19, 2019 | Team Udayavani |

ರಾಂಚಿ: ಈಗಾಗಲೇ ಎರಡು ಪಂದ್ಯಗಳಲ್ಲಿ ಸೋತು ಸರಣಿಯನ್ನು ವೈಟ್ ವಾಶ್ ರೀತಿಯಲ್ಲಿ ಕಳೆದುಕೊಳ್ಳುವ ಭೀತಿಯಲ್ಲಿರುವ ದಕ್ಷಿಣ ಆಫ್ರಿಕಾ ನಾಯಕನಿಗೆ ಹೊಸತೊಂದು ಭಯ ಎದುರಾಗಿದೆ. ಇದೇ ಭಯದಿಂದ ಹರಿಣಗಳ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ರಾಂಚಿ ಪಂದ್ಯದಲ್ಲಿ ಟಾಸ್ ಪ್ರಕ್ರಿಯೆಗೆ ಹೋಗದಿರಲು ಚಿಂತನೆ ನಡೆಸಿದ್ದಾರೆ.

Advertisement

ಹೌದು. ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ಗೆ ಎದುರಾಗಿರುವುದು ಟಾಸ್ ಭಯ. ಅದಕ್ಕೂ ಕಾರಣವಿದೆ. ಏಶ್ಯಾದಲ್ಲಿ ನಡೆದ ಕಳೆದ 9 ಪಂದ್ಯಗಳಲ್ಲಿ ಡುಪ್ಲೆಸಿಸ್ ಟಾಸ್ ಗೆದ್ದೇ ಇಲ್ಲ. ಪ್ರತಿ ಸಲ ಟಾಸ್ ಗೆ ಹೋದಾಗಲೂ ಪ್ಲೆಸಿಸ್ ಪೆಚ್ಚು ಮೋರೆ ಹಾಕಿಯೇ ಹಿಂದೆ ಬರುತ್ತಿದ್ದರು. ಹೀಗಾಗಿ ಈ ಬಾರಿ ಬೇರೆ ಯಾರನ್ನಾದರು ಟಾಸ್ ಗೆ ಕಳುಹಿಸಲು ಹರಿಣಗಳ ನಾಯಕ ಯೋಜನೆ ಹಾಕಿದ್ದಾರೆ.

ಭಾರತ- ದಕ್ಷಿಣ ಆಫ್ರಿಕಾ ನಡುವಿನ ತೃತೀಯ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಶನಿವಾರ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next