Advertisement

ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಸಕಲ ಸೌಲಭ್ಯ

09:21 PM May 27, 2021 | Team Udayavani |

ಮುಂಡಗೋಡ: ಕುಟುಂಬದಲ್ಲಿರುವ ಒಬ್ಬ ವ್ಯಕ್ತಿಗೆ ಸೋಂಕು ದೃಢವಾದರೆ ಅವರನ್ನು ಕಡ್ಡಾಯವಾಗಿ ಇಲ್ಲಿನ ಕೋವಿಡ್‌ ಕೇರ್‌ ಸೆಂಟರ್‌ಗೆ ಕರೆತರಲಾಗುವುದು ಎಂದು ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್‌ ಹೇಳಿದರು.

Advertisement

ಅವರು ತಾಲೂಕು ಆಸ್ಪತ್ರೆಗೆ ಮತ್ತು ಇಲ್ಲಿನ ಕೋವಿಡ್‌ ಕೇರ್‌ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಾಡಳಿತವು ಸುಸುಜ್ಜಿತ 90 ಬೆಡ್‌ನ‌ ಕೋವಿಡ್‌ ಕೇರ ಸೆಂಟರ್‌ ತೆರೆದಿದ್ದಾರೆ. ಈ ಕೇರ್‌ ಸೆಂಟರ್‌ನಲ್ಲಿ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದೆ. ರುಚಿಕರ ಊಟವನ್ನು ಹೋಟೆಲ್‌ಗ‌ಳಿಂದ ತಂದು ಕೊಡಲಾಗುತ್ತಿದೆ. ಕುಡಿಯವ ನೀರು, ವಾಷಿಂಗ್‌ ಮಷಿನ್‌, ಬಿಸಿ ನೀರು ಮತ್ತು ಗೀಸರ್‌ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ರೂಂನಲ್ಲಿ ಪ್ರತ್ಯೇಕ ಶೌಚಾಲಯವಿದೆ. ತಾಲೂಕಿನಲ್ಲಿ ಕೋವಿಡ್‌ ನಿಯಂತ್ರಿಸಲು ಈಗಾಗಲೇ ಎಲ್ಲಾ ತರಹದ ಪ್ರಯತ್ನವನ್ನು ತಹಶೀಲ್ದಾರ್‌ ನೇತೃತ್ವದ ತಂಡ ಮಾಡುತ್ತಿದೆ. ವಿಭಾಗಕ್ಕೆ ಹೋಲಿಸಿದರೆ ಯಲ್ಲಾಪುರದಲ್ಲಿ ಕೇವಲ 27 ಪ್ರಕರಣ ಪತ್ತೆಯಾಗಿದೆ. ಶಿರಸಿ ಮತ್ತು ಮುಂಡಗೋಡ ತಾಲೂಕುಗಳಲ್ಲಿ ಪ್ರಕರಣದ ಪ್ರಮಾಣ ಸ್ವಲ್ಪ ಹೆಚ್ಚಾಗಿದ್ದರು ನಿಯಂತ್ರಣದಲ್ಲಿದೆ. ನಮಗೆ ಆಕ್ಸಿಜನ್‌ ಆಗಲಿ, ವೈದ್ಯಕೀಯ ಸೌಕರ್ಯಗಳಾಗಲಿ ಯಾವುದೇ ರೀತಿಯಲ್ಲಿ ಕೊರತೆ ಇಲ್ಲ ಎಂದರು.

ಸೋಂಕಿತರ ಆರೋಗ್ಯ ವಿಚಾರಿಸಿ ಕೇಂದ್ರದ ಪ್ರತಿ ವಾರ್ಡಿಗೂ ಭೇಟಿ ನೀಡಿ ಸಿದ್ಧತೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ತಾಲೂಕು ಆಸ್ಪತೆ ಮತ್ತು ವ್ಯಾಕ್ಸಿನ್‌ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಹಶೀಲ್ದಾರ್‌ ಶ್ರೀಧರ ಮುಂದಲಮನಿ, ಆಡಳಿತ ವೈದ್ಯಾಧಿ ಕಾರಿ ಎಚ್‌. ಎಫ್‌. ಇಂಗಳೆ, ಪಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಉಪತಹಶೀಲ್ದಾರ್‌ ಜೆ.ಬಿ. ಭಟ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next