Advertisement

Facebook advertising: ರಾಶಿ ಹರಳು ಖರೀದಿಸಲು ಹೋಗಿ 19 ಸಾವಿರ ಕಳೆದುಕೊಂಡ ಉದ್ಯಮಿ

01:22 PM Sep 13, 2023 | Team Udayavani |

ಬೆಂಗಳೂರು: ಫೇಸ್‌ಬುಕ್‌ ಜಾಹೀರಾತಿನಲ್ಲಿದ್ದ ರಾಶಿ ಹರಳು ಖರೀದಿಸಲು ಯತ್ನಿಸಿದ ಉದ್ಯಮಿಯೊಬ್ಬರು 19 ಸಾವಿರ ರೂ. ಕಳೆದುಕೊಂಡಿದ್ದಾರೆ.

Advertisement

ಈ ಸಂಬಂಧ ರಿಚ್ಮಂಡ್‌ಟೌನ್‌ ನಿವಾಸಿ ಸೈಯದ್‌ ಅಮರ್‌ ಖಸೀಂ ಎಂಬವರು ಕೇಂದ್ರ ವಿಭಾಗದ ಸೆನ್‌ ಠಾಣೆಗೆ ದೂರು ನೀಡಿದ್ದಾರೆ. ಆ.8ರಂದು ಫೇಸ್‌ಬುಕ್‌ ನೋಡುವಾಗ ಸುಭಾಶ ನಂದಿನಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ ರಾಶಿ ಹರಳು ಮಾರಾಟಕ್ಕಿದೆ ಎಂಬ ಜಾಹೀರಾತು ಹಾಕಿದ್ದನ್ನು ಗಮನಿಸಿದ್ದಾರೆ.

ಬಳಿಕ ಅದನ್ನು ಖರೀದಿಸಲು ತಮ್ಮ ಬ್ಯಾಂಕ್‌ನಿಂದ ಸುಭಾಶ ನಂದಿನಿ ನೀಡಿದ ಅಕºರ್‌ ಅಲಿ ಎಂಬ ಹೆಸರಿನ ಖಾಸಗಿ ಬ್ಯಾಂಕ್‌ ಖಾತೆಗೆ 19,375 ರೂ. ವರ್ಗಾವಣೆ ಮಾಡಿದ್ದಾರೆ. ಆದರೆ, ಆರೋಪಿಗಳು ರಾಶಿ ಹರಳನ್ನು ನೀಡಿಲ್ಲ. ಜತೆಗೆ ದೂರುದಾರರು ವರ್ಗಾವಣೆ ಮಾಡಿದ್ದ ಹಣವನ್ನು ವಾಪಸ್‌ ಕೊಟ್ಟಿಲ್ಲ. ಈ ಸಂಬಂಧ ಸೈಯದ್‌ ಅಮರ್‌ ಖಾಸೀಂ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಸೆನ್‌ ಠಾಣೆ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next