Advertisement

ಸಮಸ್ಯೆ ಬಂದಾಗ ಧೈರ್ಯವಾಗಿ ಎದುರಿಸಿ: ಭಜಂತ್ರಿ

06:44 AM Jun 15, 2020 | Suhan S |

ರಾಯಬಾಗ: ಅಧಿಕಾರದಲ್ಲಿದ್ದಾಗ ಕ್ರಿಯಾಶೀಲತೆ, ಪ್ರಾಮಾಣಿಕತೆಯಿಂದ ದಕ್ಷವಾಗಿ ಆಡಳಿತ ನಡೆಸಿ ಜನಸಾಮಾನ್ಯರ ಜೊತೆಗೆ ಜನಸಾಮಾನ್ಯರಾಗಿ ಸೇವೆ ಒದಗಿಸಿದಾಗ ಜನತಾ ಜನಾರ್ದನ ಸೇವೆಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎಸ್‌. ಭಜಂತ್ರಿ ಹೇಳಿದರು.

Advertisement

ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ಹೊಂದಿ ಗ್ರೇಡ್‌ಒನ್‌ ಅಧಿಕಾರಿಯಾಗಿ ಮಧುಗಿರಿ ಜಿಲ್ಲೆಯ ದೈಹಿಕ ಶಿಕ್ಷಣ ಅಧೀಕ್ಷಕರಾಗಿ ಆಯ್ಕೆಯಾಗಿ ಪದೋನ್ನತಿ ಹೊಂದಿದ ಡಿ.ಎಸ್‌. ಡಿಗ್ರಜ್‌ ಅವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಸ್ಯೆಗಳು ಬರುವುದು ಸಾಮಾನ್ಯ. ಅವುಗಳಿಂದ ವಿಚಲಿತರಾಗದೆ ಧೈರ್ಯ ಹಾಗೂ ಜಾಣ್ಮೆಯಿಂದ ಬಗೆಹರಿಸಿಕೊಂಡು ಶಿಕ್ಷಕರು ಸಮಾಜದಲ್ಲಿ ಬೆರೆಯಬೇಕೆಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿ.ಎಸ್‌. ಡಿಗ್ರಜ್‌, ಸೇವಾ ವೃತ್ತಿಯಲ್ಲಿನ ತೊಂದರೆಗಳನ್ನು ಸರಿಪಡಿಸಿಕೊಂಡು ಎಲ್ಲರ ಜೊತೆಗೆ ಅವಿನಾಭಾವದಿಂದ ವರ್ತಿಸಬೇಕು. ಇಲಾಖೆ ಆದೇಶಗಳನ್ನು ಪಾಲಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಬಿ.ಎಂ. ಮಾಳಿ, ಎಸ್‌.ಆರ್‌. ಕಂಬಾರ, ಎಚ್‌.ಬಿ. ಬೆನಾಡೆ, ಆರ್‌.ಟಿ. ಅರವಳ್ಳಿ, ಎಸ್‌.ಆರ್‌. ಗೊಂದಳಿ, ಆರ್‌.ವಿ. ಸತ್ತಿಕರ, ಅಶೋಕ ಗಸ್ತಿ, ಪಿ.ಎಸ್‌. ಶಾರಬಿದರಿ, ಅಮೋಘ ನಾಯಿಕ, ಜಡ್‌.ಆರ್‌. ಮುಲ್ಲಾ, ಎಲ್‌.ಬಿ. ಬಂಡಗರ, ಆರ್‌.ಎಸ್‌. ಮಿಟಾರೆ, ವಿ.ಡಿ. ಉಪಾಧ್ಯ, ಎಂ.ಜಿ. ಭೋರಗಾಂವಿ, ಡಿ.ವೈ. ನಂದಿಹಾಳ, ಎಂ.ಬಿ. ಕಸರಡ್ಡಿ, ಆರ್‌.ಎ. ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next