Advertisement

ಹಾಡಿನ ಸಂಭ್ರಮದಲ್ಲಿ ನೇತ್ರದಾನ!

10:53 AM Nov 22, 2017 | |

ಒಂದು ಚಿತ್ರದ ಆಡಿಯೋ ಸಿಡಿ ಬಿಡುಗಡೆ ಹೇಗಿರಬೇಕು? ಮನರಂಜನೆ ಹೊರತು ಇನ್ನೇನಿದ್ದರೆ ಚಂದ ಹೇಳಿ? ಆದರೆ, ಇಲ್ಲೊಂದು ಹೊಸಬರ ತಂಡ ವಿಶೇಷವಾಗಿ ಆ ಆಡಿಯೋ ಬಿಡುಗಡೆಗೆ ಸಾಕ್ಷಿಯಾಗಿದೆ. ಅದು ‘ಸಿಹಿರ್‌’. ಹೌದು, ಮೈಸೂರಲ್ಲಿ ನಡೆದ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಒಂದು ವಿಶೇಷ ವಿಷಯಕ್ಕೆ ಕಾರಣವಾಯಿತು.

Advertisement

ಅಂದು ಅಂಧರ ಮೂಲಕ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದು ಒಂದು ವಿಷಯವಾದರೆ, ಇನ್ನೊಂದು ವಿಶೇಷ, ಚಿತ್ರತಂಡದ ಸದಸ್ಯರು ನೇತ್ರದಾನ ಮಾಡುವ ಮೂಲಕ ಆ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅರುಣ್‌ ಬಿ.ಎಂ.ಗೌಡ ನಿರ್ಮಾಣದ ಈ ಚಿತ್ರಕ್ಕೆ ವಿ.ಮೋ.ಮಿಥುನ್‌ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಕಿಣಿ ವಿನೋದ್‌, ನಿರಂಜನ್‌ ದೇಶಪಾಂಡೆ, ನೇಹಾ, ನೀನಾಸಂ ಅಶ್ವತ್ಥ್, ಸುಚೇಂದ್ರ ಪ್ರಸಾದ್‌, ಮಿತ್ರ ಇತರರು ನಟಿಸಿದ್ದಾರೆ. ಅಂದಹಾಗೆ, ಆನಂದ್‌ ಆಡಿಯೋ ಈ ಚಿತ್ರದ ಹಾಡುಗಳನ್ನು ಹೊರತಂದಿದೆ. ಅಂದು ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಿಣಿ ವಿನೋದ್‌, ನಿರಂಜನ್‌ ದೇಶಪಾಂಡೆ, ನೇಹಾ, ನಿರ್ದೇಶಕ ಮಿಥುನ್‌, ನಿರ್ಮಾಪಕ ಅರುಣ್‌ ಬಿ.ಎಂ.ಗೌಡ ಹಾಗೂ ಸಂಗೀತ ನಿರ್ದೇಶಕಿ ಚೈತ್ರ ಇತರರು ಹಾಜರಿದ್ದರು.

ಚಿತ್ರದಲ್ಲಿ ಐದು ಹಾಡುಗಳಿದ್ದು, ವಿ. ನಾಗೇಂದ್ರಪ್ರಸಾದ್‌, ಕವಿರಾಜ್‌ ಹಾಗೂ ಕೀರ್ತಿ ಶ್ರೀನಿವಾಸ್‌ ಗೀತೆಗಳನ್ನು ರಚಿಸಿದ್ದಾರೆ. ಚಿತ್ರದ ಮೊದಲ ಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ. ಸತ್ಯ ಕ್ಯಾಮೆರಾ ಹಿಡಿದರೆ, ಸುರೇಶ್‌ ಅವರ ಸಂಕಲನವಿದೆ. ಅಲ್ಟಿಮೆಟ್‌ ಶಿವು ಸಾಹಸ ಮಾಡಿದ್ದಾರೆ. ಎನ್‌. ಹನುಮಂತರಾವ್‌ ಅವರ ಸಹ ನಿರ್ಮಾಣವಿದೆ. ಕಿರಣ್‌ ಹಿನ್ನಲೆ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next