Advertisement

Politics: ಸಚಿವರ ಪಿಎಗಳಿಂದಲೂ ವಸೂಲಿ ದಂಧೆ- ಅಶೋಕ್‌

12:12 AM Nov 30, 2023 | Team Udayavani |

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು ಮಾತ್ರವಲ್ಲದೆ ಆಪ್ತ ಸಹಾಯಕರೂ ದಂಧೆ ಗಿಳಿದಿದ್ಧಾರೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಆರೋಪಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸರಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ನಾವು ಮಾಡುತ್ತಿದ್ದ ಆರೋಪಕ್ಕೆ ಕಾಂಗ್ರೆಸ್‌ ಶಾಸಕ ಬಿ.ಆರ್‌. ಪಾಟೀಲ್‌ ಮುಖ್ಯಮಂತ್ರಿಗೆ ಬರೆದ ಪತ್ರದಿಂದ ಮತ್ತೂಮ್ಮೆ ಸಾಬೀತಾಗಿದೆ ಎಂದು ಆರೋಪಿಸಿದರು. ಸಚಿವರ ಜತೆಗೆ ಅವರ ಪಿಎಗಳು ಕೂಡ ಬಹಿರಂಗ ವಾಗಿಯೇ ವಸೂಲಿಗೆ ಇಳಿದಿದ್ಧಾರೆ. ಧೈರ್ಯವಿರುವ ಶಾಸಕರು ಮಾತ್ರ ವಿರೋಧಿಸುತ್ತಿದ್ದು, ಎರಡನೇ ಬಾರಿ ಬಿ.ಆರ್‌. ಪಾಟೀಲ್‌ ಪತ್ರ ಬರೆದಿದ್ಧಾರೆ. ನಾನು ಸದನಕ್ಕೆ ಬರುವುದಿಲ್ಲ ಎಂದು ಹೇಳುವ ಮೂಲಕ ಅವರು, ಧೈರ್ಯ ತೋರಿಸಿದ್ಧಾರೆ. ಕಳಪೆ ಕಾಮಗಾರಿ ಬಗ್ಗೆ ತನಿಖೆ ಆಗಬೇಕೆಂದು ಒತ್ತಾಯಿಸಿದ್ದಾರೆ. ಉಳಿದವರು ಹೆದರಿ ಕುಳಿತಿದ್ಧಾರೆ. ಮಂತ್ರಿಗಳು ಹೆದರಿಸುತ್ತಿದ್ಧಾರೆ ಎಂದು ಟೀಕಿಸಿದರು.

ಅಂಬಿಕಾಪತಿ ಹೃದಯಾ ಘಾತದಿಂದ ಸಾವನ್ನಪ್ಪಿದ್ಧಾರೆ. ಅವರ ಸಾವಿಗೆ ಒತ್ತಡ ಇತ್ತು ಎಂದು ಪತ್ರಿಕೆಯಲ್ಲಿ ಬಂದಿದೆ. ಯಾರ ಒತ್ತಡ ಇತ್ತು ಎಂಬುದನ್ನು ಸರಕಾರ ತಿಳಿಸಬೇಕು. ಅಧಿಕಾರಿಗಳಾ ಅಥವಾ ಪಕ್ಷದವರಾ ಎಂಬುದನ್ನು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next