ಪಿದ್ದು, ಸುಲಿಗೆ, ಸಾಲದ ಬಜೆಟ್ ಮಂಡನೆಯಾಗಿದೆ ಎಂದು ಶಾಸಕ ಯು.ಟಿ.ಖಾದರ್ ಪತ್ರಿಕಾ
ಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
Advertisement
ಸ್ವಾತಂತ್ರ್ಯ ಬಂದ ನಂತರದಿಂದ 2018ರ ಸಿದ್ದರಾಮಯ್ಯ ಸರಕಾರದ ಅಂತ್ಯದ ವರೆಗೆ 2.42ಲಕ್ಷ ಕೋ.ರೂ.ಇದ್ದ ರಾಜ್ಯ ಸರಕಾರದ ಸಾಲ 2023ರಲ್ಲಿ 5.64 ಲಕ್ಷ ಕೋ.ರೂ.ಗೆ ಏರಿಕೆಯಾಗಿದೆ. 5 ವರ್ಷದಲ್ಲಿ 3.20 ಲಕ್ಷ ಕೋಟಿ ರೂ. ಸಾಲ ಮಾಡಿ ಜನರ ಮೇಲೆ ಇಟ್ಟಿದೆ. 3.9 ಲಕ್ಷ ಕೋಟಿ ರೂ.ಬಜೆಟ್ನಲ್ಲಿ 2.45 ನಿಗದಿತ ವೆಚ್ಚಕ್ಕೆ ಮೀಸಲಾಗಿರಿಸಲಾಗಿದ್ದು, ಇದು ಅಭಿವೃದ್ಧಿಯಲ್ಲಿ ಬರುವುದಿಲ್ಲ. ಎಂದರು.
ರಾಜ್ಯ ಸರಕಾರ ಕೊನೇ ಉಸಿರು ಎಳೆಯುತ್ತಿರುವ ಸಂದರ್ಭದಲ್ಲಿ ಅಭಿವೃದ್ಧಿಯ ಬದಲು ಟಿಪ್ಪು, ಪಾಕಿಸ್ಥಾನ, ಭಯೋತ್ಪಾದನೆ, ತಾಲಿಬಾನ್, ಎಸ್ಡಿಪಿಐ, ಎಂಐಎಂ ಇವುಗಳೇ ಸರಕಾರಕ್ಕೆ ಆಕ್ಸಿಜನ್. ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳಾದ ಉಚಿತ ವಿದ್ಯುತ್ ಮತ್ತು ಮನೆ ಯಜಮಾನಿಗೆ 2 ಸಾವಿರ ರೂ. ಘೋಷಣೆಗೆ ಬದ್ಧವಾಗಿದೆ ಎಂದವರು ಹೇಳಿದರು.
Related Articles
Advertisement