Advertisement

ಮಾರಕಾಸ್ತ್ರ ತೋರಿಸಿ ಸುಲಿಗೆ: ನಾಲ್ವರ ಸೆರೆ

12:47 PM Jul 21, 2022 | Team Udayavani |

ಬೆಂಗಳೂರು: ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ದ್ವಿಚಕ್ರ ವಾಹನ ಕಸಿದುಕೊಂಡು ಸುಲಿಗೆ ಮಾಡುತ್ತಿದ್ದ ನಾಲ್ವರು ಸುಲಿಗೆಕೋರರನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಅಶೋಕನಗರದ ಅಜಿತ್‌ ಅಲಿಯಾಸ್‌ ಬಾಬು (25), ಹಲಸೂರಿನ ಜೋಸೆಫ್ ಅಲಿಯಾಸ್‌ ಸ್ಪೀಡ್‌ (26), ಟ್ಯಾನಿ ರಸ್ತೆಯ ಅರ್ಜುನ್‌(26), ಕೆ.ಜಿ.ಹಳ್ಳಿಯ ಯಾಸಿನ್‌ ಪಾಷ ಅಲಿಯಾಸ್‌ ವಸೀಂ(26) ಬಂಧಿತರು. ಆರೋಪಿಗಳಿಂದ 6 ಲಕ್ಷ ರೂ. ಮೌಲ್ಯದ 6 ದ್ವಿಚಕ್ರ ವಾಹನ, 20 ಮೊಬೈಲ್‌ ಜಪ್ತಿ ಮಾಡಲಾಗಿದೆ.

ಜು. 9ರ ರಾತ್ರಿ 11 ಗಂಟೆ ಸುಮಾರಿಗೆ ಮರ್ಫಿಟೌನ್‌ ನಿವಾಸಿ ಅಜಿತ್‌ ಎಂಬುವರು ರಾಜಾರಾಮ್‌ ಮೋಹನ್‌ ರಾಯ್‌ ರಸ್ತೆಯ ಫ‌ುಟ್‌ಪಾತ್‌ ನ ಟೀ ಅಂಗಡಿ ಬಳಿ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಊಟಕ್ಕೆ ಹೋಗಿದ್ದು, ವಾಪಸ್‌ ಬಂದಾಗ ಆರೋಪಿಗಳು ಏಕಾಏಕಿ ಅಜಿತ್‌ ಅವರನ್ನು ಸುತ್ತುವರೆದು ಮಾರಕಾಸ್ತ್ರ ಹಿಡಿದು ಬೆದರಿಸಿ ದ್ವಿಚಕ್ರ ವಾಹನ ಕಸಿದುಕೊಂಡು 200 ರೂ. ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಅಶೋಕನಗರ, ಹಲಸೂರು, ಭಾರತೀನಗರ ಸೇರಿ ವಿವಿಧ ಠಾಣೆಗಳಲ್ಲಿ ದರೋಡೆ, ಸುಲಿಗೆ ಪ್ರಕರಣ ಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next