Advertisement

Train: ಇಂದಿನಿಂದ ವಿಸ್ತರಿತ ಮೈಸೂರು – ಮುರ್ಡೇಶ್ವರ ರೈಲು ಸಂಚಾರ

02:37 AM Sep 16, 2023 | Team Udayavani |

ಕುಂದಾಪುರ: ಮಂಗಳೂರಿನವರೆಗೆ ಮಾತ್ರ ಸಂಚರಿಸುತ್ತಿದ್ದ ಬೆಂಗಳೂರು-ಮೈಸೂರು ರೈಲನ್ನು ಈಗ ಮುರ್ಡೇಶ್ವರದವರೆಗೆ ವಿಸ್ತರಿಸಲಾಗಿದ್ದು, ಸೆ. 16ರಿಂದ ಈ ರೈಲು ಸಂಚಾರ ಆರಂಭಗೊಳ್ಳಲಿದೆ. ಬೆಂಗಳೂರಿನಿಂದ ಸೆ. 16ರ ರಾತ್ರಿ ಹೊರಡಲಿದ್ದು, ಮೈಸೂರು, ಸೆ. 17ರಂದು ಉಡುಪಿ, ಕುಂದಾಪುರ ಮೂಲಕ ಮುರ್ಡೇಶ್ವರ ತಲುಪಲಿದೆ.

Advertisement

ಈ ಹಿಂದೆ ಈ ರೈಲು ಮಂಗಳೂರುವರೆಗೆ ಮಾತ್ರ ಸಂಚರಿಸುತ್ತಿತ್ತು. ಕರಾವಳಿ, ಅದರಲ್ಲೂ ಕುಂದಾಪುರ ಭಾಗದ ರೈಲು ಪ್ರಯಾಣಿಕರ ಒತ್ತಾಯ, ಜನಪ್ರತಿನಿಧಿಗಳ ಪ್ರಯತ್ನದಿಂದಾಗಿ ಈ ರೈಲು ಸಂಚಾರವನ್ನು ಮುರ್ಡೇಶ್ವರದವರೆಗೆ ವಿಸ್ತರಿಸಲಾಗಿದೆ. ಇದರಿಂದ ಮೈಸೂರು ಭಾಗದಿಂದ ಕರಾವಳಿಗೆ ಬರುವವರಿಗೆ, ಕರಾವಳಿ ಭಾಗದಿಂದ ಮೈಸೂರು ಕಡೆಗೆ ತೆರಳುವವರಿಗೆ ಅನುಕೂಲವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next