Advertisement

ಶಾಲಾ-ಕಾಲೇಜುಗಳಿಗೆ ಅನುದಾನ ವಿಸ್ತರಿಸಿ

03:47 PM Nov 03, 2019 | Suhan S |

ಸವದತ್ತಿ: ಖಾಸಗಿ ಅನುದಾನ ರಹಿತ ಶಾಲಾ-ಕಾಲೇಜುಗಳಿಗೆಅನುದಾನ ವಿಸ್ತರಿಸಬೇಕೆಂದು ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಮತ್ತು ನೌಕರರ ಹೋರಾಟ ಸಮನ್ವಯ ಸಮಿತಿಯಿಂದ ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

Advertisement

ಸಮಿತಿ ಮುಖಂಡ ಎಮ್‌.ಎಸ್‌. ಕಲಾಲ ಮಾತನಾಡಿ, ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿನ ನೌಕರರ ಬದುಕು ಅತಂತ್ರ ಸ್ಥಿತಿ ತಲುಪಿದೆ. ಕಡಿಮೆ ವೇತನದಿಂದ ಜೀವನ ನಡೆಸುವುದು ಕಷ್ಟವಾಗಿದೆ. ಅನುದಾನವಿಲ್ಲದೇ ಅದೆಷ್ಟೋ ಖಾಸಗಿ ಕನ್ನಡ ಮಾದ್ಯಮ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಸರಕಾರಿ ಕನ್ನಡ ಶಾಲೆಗಳು ಅಳಿವಿನಂಚಿಗೆ ತಲುಪಿ ಕನ್ನಡ ಭಾಷೆ ಕಡೆಗಣಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಸರಕಾರ ಕೂಡಲೇ ಈ ಕುರಿತು ಕ್ರಮವಹಿಸಿ ಕನ್ನಡ ಶಾಲೆ ಮತ್ತು ಕನ್ನಡ ಭಾಷೆಯ ಉಳಿವಿಗೆ ಒತ್ತು ನೀಡಬೇಕೆಂದು ಆಗ್ರಹಿಸಿದರು.

1995 ನಂತರದ ಅನುದಾನ ರಹಿತ ಕನ್ನಡ ಶಾಲೆಗಳಿಗೂ ಅನುದಾನ ವಿಸ್ತರಿಸಬೇಕು. ಈಗಾಗಲೇ ಸರಕಾರ ಜಾರಿಗೊಳಿಸಿರುವ ಎನ್‌.ಪಿ.ಎಸ್‌ ಯೋಜನೆಯನ್ನು ರದ್ದು ಮಾಡಬೇಕು. ಕಾಲ್ಪನಿಕ ವೇತನ ಬಡ್ತಿ ಜಾರಿಯಾಗಬೇಕು. ಶಿಕ್ಷಕರ ಮತ್ತು ಮಕ್ಕಳ ಅನುಪಾತವನ್ನು 1:30 ರಿಂದ 1:50 ಕ್ಕೇರಿಸಿ ಎಲ್ಲರೂ ಸಹಜ ಜೀವನ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಬಸವರಾಜ ತಳವಾರ, ಬಸಪ್ಪ ಜೋಗಿಹಳ್ಳಿ, ಜ್ಞಾನೇಶ್ವರ ಕೊಪ್ಪದ, ಐ.ಎಸ್‌.ಹೊರಗಿನಮಠ, ಆರ್‌.ಎಸ್‌.ಪಾಟೀಲ, ಎನ್‌.ಬಿ. ಮಠ, ಎ.ಆರ್‌. ಶಿರಸಂಗಿ, ವೀರೇಶ ಹಿರೇಮಠ ಸೇರಿದಂತೆ ಪ್ರಮುಖರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next