Advertisement

“ಕುಂಬಳೆ ಬೆಡಿ’ಗಾಗಿ ಸಿದ್ಧಪಡಿಸಿದ್ದ ಸಿಡಿಮದ್ದು ಪೊಲೀಸರ ವಶಕ್ಕೆ

11:56 PM Feb 27, 2024 | Team Udayavani |

ಕುಂಬಳೆ: ಇಲ್ಲಿನ ಕಣಿಪುರ ದೇವಸ್ಥಾನ ಪ್ರಸಿದ್ಧ “ಕುಂಬಳೆ ಬೆಡಿ’ ಬುಧವಾರ ನಡೆಯಲಿದ್ದು ಅದಕ್ಕಾಗಿ ಪಾಲಕ್ಕಾಡಿನ ವಡಕ್ಕಾಂಚೇರಿ ಆಲತ್ತೋಡಿನ ಸುಡುಮದ್ದು ಘಟಕದಲ್ಲಿ ಸಿದ್ಧಪಡಿಸಿ ಇರಿಸಿದ್ದ ಲಕ್ಷಾಂತರ ರೂ. ಬೆಲೆಬಾಳುವ ಸುಡುಮದ್ದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Advertisement

ಸುಡುಮದ್ದು ತಯಾರಿ ಗುತ್ತಿಗೆದಾರ ಚಾಲಕುಡಿಯ ವಿ.ಸಿ. ವರ್ಗೀಸ್‌ ಅವರಿಗೆ ಇಷ್ಟೊಂದು ಪ್ರಮಾಣದಲ್ಲಿ ತಯಾರಿಗೆ ಪರವಾನಿಗೆ ಇಲ್ಲದ ಕಾರಣ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವರಿಗೆ ಸೇವೆಯಾಗಿ ಸಂಪ್ರದಾಯದಂತೆ ಹಲವು ವರ್ಷಗಳಿಂದ ಆರಿಕ್ಕಾಡಿಯ ಬೆಡಿ ಅಶ್ರಫ್‌ ಕೆಲವು ವರ್ಷಗಳಿಂದ ಸುಡುಮದ್ದು ಸಿದ್ಧ ಪಡಿಸುತ್ತಿದ್ದರು. ಕಳೆದ ವರ್ಷ ಜಾತ್ರೆ ಸಂದರ್ಭದಲ್ಲಿ ಅವರನ್ನೂ ಬಂಧಿಸಿ ಕೇಸು ದಾಖಲಿಸಿದ ಕಾರಣ ಪುತ್ತೂರಿನಿಂದ ಸಿಡಿಮದ್ದು ತರಿಸಲಾಗಿತ್ತು.

ಈ ಬಾರಿಯೂ ದೇವರ ಸೇವೆಗೆ ಯಾವುದೇ ಕೊರತೆಯಾಗದಂತೆ “ಕುಂಬಳೆ ಬೆಡಿ’ ಉತ್ಸವ ನಡೆಸಲಾಗುವುದೆಂದು ಸಂಘಟಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next