Advertisement
ಯೇನೆಕಲ್ಲು ಗ್ರಾಮದ ಆನಂದ ಗೌಡ ಅವರು ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದಾರೆ. ಆನಂದ ಗೌಡ ಅವರು ಏನೇಕಲ್ಲು ಗ್ರಾಮದ ಕುಕ್ಕಪ್ಪನ ಮನೆ ಎಂಬಲ್ಲಿ ವಾಸವಾಗಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದು, ಅವರ ಮನೆಯ ಸಮೀಪ ಏನೇಕಲ್ಲು ಗ್ರಾಮದ ಅಜಿರುಪೂಲಿ ಎಂಬಲ್ಲಿ ದಯಾನಂದ ಕುಕ್ಕಪ್ಪನ ಮನೆ ಅವರು ಜಾಗವನ್ನು ಹೊಂದಿದ್ದು, ಆ ಜಾಗದಲ್ಲಿ ದಯಾನಂದ ಅವರು ಸುಮಾರು ಎರಡು ತಿಂಗಳಿನಿಂದ, ಅವರ ಜಾಗದಲ್ಲಿದ್ದ ಕಲ್ಲುಗಳನ್ನು, ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಕಲ್ಲುಗಳನ್ನು ಒಡೆದು, ಸೈಜು ಕಲ್ಲುಗಳನ್ನಾಗಿ ತಯಾರಿಸುತ್ತಿದ್ದರು. ಈ ಕಲ್ಲುಗಳನ್ನು ಸ್ಫೋಟಕ ಬಳಸಿ ಒಡೆಯುವ ಸಮಯದಲ್ಲಿ ಕಲ್ಲುಗಳು ಸ್ಫೋಟಗೊಂಡು ಸಿಡಿದ ಕಲ್ಲಿನ ಚೂರುಗಳು ಆನಂದ ಅವರ ಮನೆಯ ಎದುರುಗಡೆ ಶೀಟುಗಳ ಮೇಲೆ ಬಿದ್ದು, ಎರಡು ಶೀಟುಗಳು ಹಾನಿಗೊಂಡಿರುತ್ತದೆ ಹಾಗೂ ಕಲ್ಲು ಹುಡಿಯಿಂದ ಪರಿಸರ ಮಾಲಿನ್ಯ ಉಂಟಾಗಿರುತ್ತದೆ ಎಂಬುದಾಗಿ ಠಾಣೆಗೆ ದೂರು ನೀಡಲಾಗಿದೆ.
Advertisement
ಸ್ಫೋಟಕ ಸಿಡಿಸಿ ಕಲ್ಲು ಒಡೆದ ಪರಿಣಾಮ ಮನೆಗೆ ಹಾನಿ; ಆರೋಪ
12:58 AM Apr 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.