Advertisement

ಪುಣೆ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ವಿಹಾರಕೂಟ

06:18 PM Dec 15, 2019 | Team Udayavani |

ಪುಣೆ, ಡಿ. 14 : ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ವತಿಯಿಂದ ಡಿ. 1ರಂದು ವಿಹಾರಕೂಟವನ್ನು ಆಯೋಜಿಸಲಾಗಿತ್ತು. ಸಂಘದ ಅಧ್ಯಕ್ಷರಾದ ಪಾಂಗಾಳ ವಿಶ್ವನಾಥ ಶೆಟ್ಟಿ ಮತ್ತು ಪದಾಧಿಕಾರಿಗಳು, ಸದಸ್ಯರೆಲ್ಲರೂ ಲೋನವಾಲಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದರು.

Advertisement

ಲೋಹೆಘಡ್‌ ಫೋರ್ಟ್‌, ಭೂಷಿ ಆಣೆಕಟ್ಟು ಹಾಗೂ ಟೈಗರ್‌ ಪಾಯಿಂಟ್‌ ಹಾಗೂ ವಿವಿಧ ಸುಂದರ ತಾಣಗಳನ್ನು ಸಂದರ್ಶಿಸಿದರು. ಬೆಳಗ್ಗೆ ನಗರದ ವರ್ಜಿಯಿಂದ ಮಿನಿ ಬಸ್‌ನ ಮೂಲಕ ಲೋನವಾಲಾದ ವಿಹಾರ ತಾಣಕ್ಕೆ ತೆರಳಿ ಸಂಜೆ ಮರಳಿದರು. ವಿಹಾರಕೂಟದಲ್ಲಿ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಪಾಂಗಾಳ, ಕೋಶಾಧಿಕಾರಿ ಸುಕೇಶ್‌ ಶೆಟ್ಟಿ ಎಣ್ಣೆಹೊಳೆ, ಕಲಾವಿದರಾದ ವಿಕೇಶ್‌ ರೈ ಶೇಣಿ, ಜಗದೀಪ್‌ ಶೆಟ್ಟಿ, ಸುದರ್ಶನ್‌ ಪೂಜಾರಿ, ಗೋಪಾಲಕೃಷ್ಣ, ನಯನಾ ಸಿ. ಶೆಟ್ಟಿ, ಗೀತಾ ಡಿ. ಪೂಜಾರಿ, ನವಿತಾ ಎಸ್‌. ಪೂಜಾರಿ, ಸರಸ್ವತಿ ಸಿ. ಕುಲಾಲ್‌, ಕು| ಸಹನಾ ಸಿ. ಕುಲಾಲ್‌, ಕು| ಪ್ರತೀಕ್ಷಾ ಡಿ. ಪೂಜಾರಿ, ಕು| ದಿಶಾ ಪೂಜಾರಿ, ಕು| ರೀಷ್ಮಾ ಆರ್‌. ಶೆಟ್ಟಿ ಹಾಗೂ ಕು| ಪ್ರಾಪ್ತಿ ಕೆ. ರೈ ಮತ್ತಿತರ ಸದಸ್ಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next