Advertisement

ಅಂತರ್ಜಾತಿ ವಿವಾಹವಾದವನಿಗೆ ಬಹಿಷ್ಕಾರ: ಪ್ರಕರಣ ದಾಖಲು

09:24 PM Mar 05, 2023 | Team Udayavani |

ಕೊಳ್ಳೇಗಾಲ: ಅಂತರ್ಜಾತಿ ವಿವಾಹವಾಗಿದ್ದವನಿಗೆ ಗ್ರಾಮಸ್ಥರು 3 ಲಕ್ಷ ರೂ.ದಂಡ ವಿಧಿಸಿ ಬಹಿಷ್ಕಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ತಾಲೂಕಿನ ಕುಣಗಳ್ಳಿ ಗ್ರಾಮದ 15 ಮುಖಂಡರ ಮೇಲೆ ರವಿವಾರ ದೂರು ದಾಖಲಾಗಿದೆ.

Advertisement

ಕುಣಗಳ್ಳಿ ಗ್ರಾಮದ ಗೋವಿಂದರಾಜು ಎಂಬವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೂವಿನ ಕೊಪ್ಪಲು ಗ್ರಾಮದ ದಲಿತ ಕೋಮಿಗೆ ಸೇರಿದ ಪ್ರಕಾಶ್‌ ಅವರ ಪುತ್ರಿ ಶ್ವೇತಾಳನ್ನು 5 ವರ್ಷಗಳ ಹಿಂದೆ ಮಳವಳ್ಳಿ ಸಬ್‌ ರಿಜಿಸ್ಟಾರ್‌ ಕಚೇರಿಯಲ್ಲಿ ವಿವಾಹವಾಗಿದ್ದರು.

ಗೋವಿಂದರಾಜು ದಲಿತ ಯುವತಿಯೊಂದಿಗೆ ವಿವಾಹವಾಗಿರುವುದು 5 ವರ್ಷಗಳ ಬಳಿಕ ಬೆಳಕಿಗೆ ಬಂದ ವೇಳೆ ಗ್ರಾಮಸ್ಥರು ಗೋವಿಂದರಾಜುಗೆ ಬಹಿಷ್ಕಾರ ಹಾಕಿ 3 ಲಕ್ಷ ರೂ. ದಂಡ ಕಟ್ಟುವಂತೆ ತೀರ್ಮಾನ ಕೈಗೊಂಡಿದ್ದರು. ಗ್ರಾಮಸ್ಥರ ತೀರ್ಮಾನ ವಿರೋಧಿಸಿ ಮಾ. 1ರಂದು ಡಿವೈಎಸ್ಪಿ ಸೋಮೇಗೌಡ ಅವರಿಗೆ ದೂರು ಸಲ್ಲಿಸಲಾಗಿತ್ತು. ಪಂಚಾಯಿತಿ ಪ್ರಕರಣ ಠಾಣೆಯಲ್ಲಿ ದಾಖಲಾದ ಹಿನ್ನೆಲೆಯಲ್ಲಿ ಗ್ರಾಮದ ಮುಖಂಡರು 3 ಲಕ್ಷ ರೂ. ದಂಡದೊಂದಿಗೆ ಮತ್ತೆ 3 ಲಕ್ಷ ಸೇರಿ 6 ಲಕ್ಷ ರೂ. ದಂಡ ವಿಧಿಸಿದ್ದರು.

ಈ ಹಿನ್ನೆಲೆಯಲ್ಲಿ ವೆಂಕಟಶೆಟ್ಟಿ, ಮಹದೇವ, ಮೊಂದಾಸಶೆಟ್ಟಿ, ಕಪ್ಪಣ್ಣ, ಮೈಥ ನಾಗಶೆಟ್ಟಿ, ಮಹದೇವಶೆಟ್ಟಿ, ಸಿದ್ದೇಶ, ಶೆಟ್ಟಿ, ಕಾಶಿ, ಜಯಲಕ್ಷ್ಮಿ, ಮಧು, ರಂಗಸ್ವಾಮಿ, ಕುಳ್ಳ ಕುಂಜಿಕುಡಿ, ಮಹದೇವಶೆಟ್ಟಿ, ತಂಬಡಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next