Advertisement

Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್

08:02 PM Apr 22, 2024 | Team Udayavani |

ಗಂಗಾವತಿ: ಹುಬ್ಬಳ್ಳಿಯ ನೇಹಾ ಕೊಲೆ ಸಂಬಂಧ ಬೀದರ್ ನಗರದಲ್ಲಿ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಜಾತಿ ನಿಂದನೆ ಮಾಡಿ ಪುತ್ರ,ಪತ್ನಿ ಹಾಗೂ ಕುಟುಂಬದ ವಿರುದ್ಧ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ ಬೀದರ್ ನಗರದ ವಿರೂಪಾಕ್ಷ ಗಡಾಗೆ ವಿರುದ್ಧ ಗಂಗಾವತಿ ನಗರಠಾಣೆಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ ಕೇಸ್ ದಾಖಲಿಸಿದ್ದಾರೆ.

Advertisement

ಎಸ್ ಸಿ ಸಮುದಾಯಕ್ಕೆ ಸೇರಿದ ಗೃಹಸಚಿವ ಡಾ.ಜಿ.ಪರಮೇಶ್ವರ ಅವರನ್ನು ಸಾರ್ವಜನಿಕವಾಗಿ ಬೈದು ಅಪಮಾನಗೊಳಿಸಲಾಗಿದ್ದು, ಆಶ್ಲೀಲವಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಕುಟುಂಬ ಸದಸ್ಯರ ಕುರಿತು ಅಪಮಾನಕರ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ವಿರುಪಾಕ್ಷ ಗಾಡಗೆ ಮೇಲೆ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ, 1989 ಮತ್ತು ನಿಯಮಗಳು 1995 ರ ಪ್ರಕಾರ ( 2016 ರ 1, 2018ರ 27 ಮತ್ತು 2019ರ 34ನೇ ಅಧಿನಿಯಮಗಳ ಮೇರೆಗೆ ತಿದ್ದುಪಡಿಯಾದಂತೆ) ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಜಿ.ಪಂ.ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next